Bengaluru

Karnataka Bandh; ಸಾರಿಗೆ ಬಸ್‌ಗಳಿದ್ದರೂ ಪ್ರಯಾಣಿಕರೇ ಇಲ್ಲ, ಪ್ರತಿಭಟನೆ ಬಿಸಿ ಜೋರು..!

ಬೆಂಗಳೂರು; ಇಂದು ಕರ್ನಾಟಕ ಬಂದ್‌ ನಡೆಯುತ್ತಿದೆ. ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದ್ರೆ ಬಂದ್‌ ಇದ್ದರೂ ಸರ್ಕಾರಿ ಬಸ್‌ಗಳು ಕಾರ್ಯನಿರ್ವಹಿಸುತ್ತವೆ ಎಂದು ಹೇಳಲಾಗಿತ್ತು. ಬಸ್‌ಗಳೇನೋ ಬಸ್‌ ನಿಲ್ದಾಣಗಳಲ್ಲಿವೆ. ಆದ್ರೆ ಪ್ರಯಾಣಿಕರೇ ಇಲ್ಲ. ಬಹುತೇಕ ನಿಲ್ದಾಣಗಳು ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿವೆ.

ಕರ್ನಾಟಕ ಬಂದ್‌ ಇರುವುದರಿಂದ ನಿನ್ನೆಯೇ ಜನರು ತಮ್ಮ ಊರುಗಳಿಗೆ ತೆರಳಿದ್ದಾರೆ. ಹೀಗಾಗಿ ಇಂದು ಪ್ರಯಾಣಿಸುವವರೇ ಇಲ್ಲ. ಹೀಗಾಗಿ ಕಡಿಮೆ ಪ್ರಮಾಣದಲ್ಲಿ ಬಸ್‌ಗಳ ರಸ್ತೆಗಳಿದಿವೆ. ರಾಜ್ಯದ ಹಲವೆಡೆ ಬಸ್‌ಗಳ ಓಡಾಟ ನಡೆಸುತ್ತಿವೆ. ಬೆಂಗಳೂರಿನಲ್ಲೂ ಹಲವೆಡೆ ಬಸ್‌ಗಳು ಸಂಚರಿಸುತ್ತಿವೆ. ಆದ್ರೆ ಬೆಳಗ್ಗೆ ಹತ್ತು ಗಂಟೆಯ ನಂತರ ಬಂದ್‌ ಬಿಸಿಯೇರುವ ಸಾಧ್ಯತೆ ಇದೆ,

ಮೆಜೆಸ್ಟಿಕ್‌ನ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಬಸ್‌ ನಿಲ್ದಾಣದಲ್ಲಿ ಬಸ್‌ಗಳಿವೆ. ಆದ್ರೆ ಪ್ರಯಾಣಿಕರೇ ಇಲ್ಲ. ಫ್ಲಾಟ್‌ಫಾರ್ಮ್‌ಗಳು ಜನರಿಲ್ಲದೆ ಬಿಕೋ ಎನ್ನುತ್ತಿವೆ.

Share Post