BengaluruPolitics

ಗೆಲ್ಲುವ ಜೆಡಿಎಸ್‌ ಅಭ್ಯರ್ಥಿಗಳಿಗೆ ಜೆಡಿಎಸ್‌ ಗಾಳ ; ಹೆಚ್‌.ಡಿ.ಕುಮಾರಸ್ವಾಮಿ ಫುಲ್‌ ಅಲರ್ಟ್‌

ಬೆಂಗಳೂರು; ನಾಳೆ ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶ ಬರಲಿದೆ. ಈಗಾಗಲೇ ಸೋಲು ಗೆಲುವಿನ ಲೆಕ್ಕಾಚಾರ ನಡೆದಿದೆ. ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ ಕಾಂಗ್ರೆಸ್‌ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಹೀಗಾಗಿ ಬಹುಮತಕ್ಕೆ ಕಡಿಮೆ ಬಂದರೆ ಏನು ಮಾಡಬೇಕು ಅನ್ನೋದು ಲೆಕ್ಕಾಚಾರಗಳು ನಡೆದಿವೆ. ಈ ನಡುವೆ ಕಾಂಗ್ರೆಸ್‌ ನಾಯಕರು ಗೆಲ್ಲುವ ಸಾಧ್ಯತೆ ಇರುವ ಜೆಡಿಎಸ್‌ ಅಭ್ಯರ್ಥಿಗಳನ್ನು ಸಂಪರ್ಕಿಸುತ್ತಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆ. ಹೀಗಾಗಿ ಮಾಜಿ ಸಿಎಂ ಕುಮಾರಸ್ವಾಮಿ ಫುಲ್‌ ಅಲರ್ಟ್‌ ಆಗಿದ್ದಾರೆ.

ಕುಮಾರಸ್ವಾಮಿಯವರು ಗೆಲ್ಲುವ ಅಭ್ಯರ್ಥಿಗಳ ಸಂಪರ್ಕದಲ್ಲಿದ್ದು, ಯಾವುದೇ ಆಮಿಷಕ್ಕೆ ಒಳಗಾಗದಂತೆ ಸೂಚನೆ ನೀಡಿದ್ದಾರೆ. ಯಾರೂ ವಿಚಲಿತರಾಗಬೇಡಿ. ಸರ್ಕಾರ ರಚನೆಯಲ್ಲಿ ನಮ್ಮ ಪಕ್ಷದ ಪಾತ್ರವೇ ಮುಖ್ಯವಾಗುತ್ತದೆ. ಹೀಗಾಗಿ ಯಾರೇ ಆಮಿಷ ಒಡ್ಡಿದರೂ ನನಗೆ ತಿಳಿಸಿ, ಯಾರೂ ಆತುರ ಪಡೋದಕ್ಕೆ ಹೋಬೇಡಿ ಎಂದು ಅಭ್ಯರ್ಥಿಗಳಿಗೆ ಕುಮಾರಸ್ವಾಮಿ ಸೂಚನೆ ನೀಡುತ್ತಿದ್ದಾರೆ ಎನ್ನಲಾಗಿದೆ.

Share Post