Bengaluru

ಕಾವೇರಿಗಾಗಿ ಬೀದಿಗಿಳಿಯಬೇಕಾಗಿ ಬಂದಿದ್ದು ದುರಂತ; ಕ್ರಿಕೆಟಿಗ ಕೆ.ಎಲ್‌.ರಾಹುಲ್‌

ಬೆಂಗಳೂರು; ಕಾವೇರಿ ವಿಚಾರಕ್ಕೆ ಟೀಂ ಇಂಡಿಯಾ ಆಟಗಾರ ಕೆ.ಎಲ್‌.ರಾಹುಲ್‌ ಸ್ಪಂದಿಸಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ಕಾವೇರಿ ಕರ್ನಾಟಕದ ಆಸ್ತಿ. ಕಾವೇರಿ ನೀರಿಗಾಗಿ ಕನ್ನಡಿಗರು ಬೀದಿಗಿಳಿಯಬೇಕಾಗಿ ಬಂದಿರುವುದು ದುರಂತದ ಸಂಗತಿ ಎಂದು ಹೇಳಿದ್ದಾರೆ.

ಕಾವೇರಿ ಯಾವತ್ತಿಗೂ ನಮ್ಮದೇ. ಕಾವೇರಿ ಹುಟ್ಟೋದು ಕರ್ನಾಟಕದಲ್ಲಿ, ಹೆಚ್ಚು ನೀರು ಸಂಗ್ರಹವಾಗುವುದು ಕೂಡಾ ನಮ್ಮ ನಾಡಿನಲ್ಲೇ. ಹೀಗಿದ್ದರೂ, ಅದರ ಮೇಲೆ ನಾವು ಹಕ್ಕು ಕಳೆದುಕೊಳ್ಳುತ್ತಿದ್ದೇವೆ. ನಮ್ಮ ನೀರಿಗಾಗಿ ಪ್ರತಿ ವರ್ಷ ಹೋರಾಟ ಮಾಡಬೇಕಾದ ಪರಿಸ್ಥಿತಿ ಬಂದಿದೆ. ಯಾವಾಗಲೂ ಕಾನೂನು ಹೋರಾಟ ನಡೆಸಬೇಕಾದ ದುಸ್ಥಿತಿ ಇದೆ. ಇದು ನಮ್ಮ ದುರಂತ ಎಂದು ಕೆ.ಎಲ್‌.ರಾಹುಲ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Share Post