BengaluruPolitics

ಜಾತಿ ಗಣತಿ ವರದಿಯನ್ನು ನಾನೇ ನೋಡಿಲ್ಲ, ಬೇರೆಯವರು ಹೇಗೆ ನೋಡ್ತಾರೆ..?; ಸಿದ್ದರಾಮಯ್ಯ

ಬೆಂಗಳೂರು; ಜಾತಿ ಗಣತಿ ವರದಿಯಲ್ಲಿ ಏನಿದೆ ಅನ್ನೋದು ನನಗೇ ಗೊತ್ತಿಲ್ಲ. ವರದಿ ಬಂದ ಮೇಲೆ ನೋಡಿ ಪರಿಶೀಲನೆ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಜಾತಿ ಗಣತಿ ಅವೈಜ್ಞಾನಿಕವಾಗಿದೆ. ಹೀಗಾಗಿ ಆ ವರದಿಯನ್ನು ಬಿಡುಗಡೆ ಮಾಡಬಾರದು ಎಂದು ಒಕ್ಕಲಿಗರ ಸಂಘ ಪತ್ರ ನೀಡಿದೆ. ಅದರಲ್ಲಿ ಡಿ.ಕೆ.ಶಿವಕುಮಾರ್‌ ಅವರ ಸಹಿ ಕೂಡಾ ಇದೆ. ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ಕೊಟ್ಟ ಸಿದ್ದರಾಮಯ್ಯ, ಡಿಸೆಂಬರ್‌ ಅಥವಾ ಜನವರಿ ಒಳಗೆ ವರದಿ ನೀಡಲು ಹೇಳಿದ್ದೇನೆ. ಅನಂತರ ಒಕ್ಕಲಿಗರ ಮನವಿ ಪರಿಶೀಲನೆ ಮಾಡುತ್ತೇವೆ ಎಂದು ಹೇಳಿದ್ದಾರೆ.

ವರದಿಯ ಮೂಲ ಪ್ರತಿ ಕಾಣೆಯಾದ ಬಗ್ಗೆ ನನಗೆ ಗೊತ್ತಿಲ್ಲ ಎಂದಿರುವ ಸಿದ್ದರಾಮಯ್ಯ, ಯಪ್ರಕಾಶ್ ಹೆಗ್ಡೆ ಅವಧಿ ಈ ತಿಂಗಳು ಮುಗಿಯುತ್ತದೆ. ಜಾತಿಗಣತಿ ವರದಿ ಕೊಡುವವರೆಗೆ ಮುಂದುವರಿಯಲು ಹೇಳಿದ್ದೇನೆ ಎಂದಿದ್ದಾರೆ. ವರದಿಯನ್ನು ನಾನೇ ನೋಡಿಲ್ಲ. ನನ್ನ ಕೈಗೇ ವರದಿ ಇನ್ನೂ ಸಿಕ್ಕಿಲ್ಲ. ಹೀಗಿರುವಾಗ ಬೇರೆಯವರು ಹೇಗೆ ನೋಡಲು ಸಾಧ್ಯ ಎಂದು ಪ್ರಶ್ನೆಯೊಂದಕ್ಕೆ ಸಿದ್ದರಾಮಯ್ಯ ಉತ್ತರಿಸಿದರು.

 

Share Post