Bengaluru

ಚೇತರಿಸಿಕೊಳ್ಳುತ್ತಿರುವ ನಟ ದಿಗಂತ್‌; ಪತ್ನಿ ಐಂದ್ರಿತಾ ರೇ ಹೇಳಿದ್ದೇವು..?

ಬೆಂಗಳೂರು; ಗೋವಾದಲ್ಲಿ ಪಲ್ಟಿ ಹೊಡೆಯಲು ಹೋಗಿ ಕತ್ತಿಗೆ ಪೆಟ್ಟು ಮಾಡಿಕೊಂಡಿದ್ದ ನಟ ದಿಗಂತ್‌ ಚೇತರಿಸಿಕೊಳ್ಳುತ್ತಿದ್ದಾರೆ. ಅವರ ಆರೋಗ್ಯದ ಬಗ್ಗೆ ಪತ್ನಿ ಐಂದ್ರಿತಾ ರೇ ಪ್ರತಿಕ್ರಿಯೆ ನೀಡಿದ್ದಾರೆ. ದಿಗಂತ್ ನಾವು ಗೋವಾಗೆ ವೆಕೇಷನ್ ಟ್ರಿಪ್ ಹೋಗಿದ್ದೆವು. ಅಲ್ಲಿ ಅವರು ಪಲ್ಟಿ ಹೊಡೆಯುವಾಗ ಎಡವಟ್ಟಾಯಿತು. ಪೆಟ್ಟಾಗಿದೆ. ಮೊದಲಿಗೆ ಗೋವಾ ಮಣಿಪಾಲ್ ಆಸ್ಪತ್ರೆ ಗೆ ಹೋದೆವು. ಚಿಕಿತ್ಸೆಗಾಗಿ ಏರ್ ಲೀಪ್ಟ್ ಮಾಡುತ್ತೇವೆ ಎಂದಾಗ ಅದಕ್ಕೆ ಗೋವಾ ಸರ್ಕಾರ ತುಂಬಾನೇ ಸಹಕಾರ ನೀಡಿತು. ಸರ್ಜರಿ ಆಗಿದೆ, ದಿಗಂತ್ ಚೇತರಿಸಿಕೊಳ್ತಿದ್ದಾನೆ ಎಂದಿದ್ದಾರೆ.

ವೈದ್ಯರ ಪ್ರಕಾರ “ನಟ ದಿಗಂತ್ ಕುತ್ತಿದೆ ಪ್ಯಾಕ್ಚರ್ ಆಗಿತ್ತು. ಅದನ್ನ ಆಪರೇಷನ್ ಮಾಡಿದ್ದೇವೆ. ನಿನ್ನೆಗಿಂತ ಇಂದು ಆಕ್ಟೀವ್ ಆಗಿದ್ದಾರೆ. ಅವ್ರೆ ಎದ್ದು ಓಡಾಡುತ್ತಿದ್ದಾರೆ, ಊಟ ಮಾಡ್ತಿದ್ದಾರಂತೆ.

 

Share Post