Bengaluru

HIJAB ROW: ಎಂಟು ಕಾಲೇಜಿನಲ್ಲಷ್ಟೇ ವಿವಾದ; ಎಲ್ಲಾ ಸರಿ ಹೋಗುತ್ತೆ ಎಂದ ಶಿಕ್ಷಣ ಸಚಿವ

ಬೆಂಗಳೂರು: ಹಿಜಾಬ್‌ ವಿವಾದ ಕೇವಲ ಎಂಟು ಕಾಲೇಜಿನಲ್ಲಷ್ಟೇ ಇದೆ. ಇದನ್ನು ನಾವು ಸರಿ ಮಾಡುತ್ತೇವೆ. ಎಲ್ಲವೂ ಸರಿ ಹೋಗುತ್ತದೆ ಎಂದು ಶಿಕ್ಷಣ ಬಿ.ಸಿ.ನಾಗೇಶ್ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿರುವ ಅವರು, ಬಿಂದಿ, ಕುಂಕುಮ ತೊಡುವುದು ಅಲಂಕಾರಕ್ಕೆ ಮಾತ್ರ. ಅದನ್ನು ಸಮವಸ್ತ್ರಕ್ಕೆ ಹೋಲಿಕೆ ಮಾಡುವುದು ಎಷ್ಟು ಸರಿ ಎಂದು ಅವರು ಪ್ರಶ್ನೆ ಮಾಡಿದರು. ರಾಜ್ಯದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದ್ರೆ ಕೇವಲ 500 ರಷ್ಟು ವಿದ್ಯಾರ್ಥಿಗಳು ಮಾತ್ರ ವಿವಾದ ಎಬ್ಬಿಸುತ್ತಿದ್ದಾರೆ. ಹೀಗಾಗಿ ನಾವು ಎಲ್ಲವನ್ನೂ ಸರಿಪಡಿಸುತ್ತೇವೆ. ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ಸಚಿವ ಬಿ.ಸಿ.ನಾಗೇಶ್‌ ಸ್ಪಷ್ಟಪಡಿಸಿದ್ದಾರೆ.

Share Post