BengaluruPolitics

ಉಚಿತ ಗ್ಯಾರೆಂಟಿ ಚುನಾವಣಾ ಗಿಮಿಕ್ ಹೇಳಿಕೆ; ಈಗ ಮಾತು ಬದಲಿಸಿದ ಸಚಿವ ಚಲುವರಾಯಸ್ವಾಮಿ

ಮಂಡ್ಯ; ಉಚಿತ ಗ್ಯಾರೆಂಟಿ ಚುನಾವಣಾ ಗಿಮಿಕ್‌ ಅಷ್ಟೇ ಎಂಬ ರೀತಿಯಲ್ಲಿ ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಮಾತನಾಡಿದ್ದರು. ಇದು ವೈರಲ್‌ ಆಗುತ್ತಿದ್ದಂತೆ ಸಚಿವರು ಎಚ್ಚೆತ್ತುಕೊಂಡಿದ್ದಾರೆ. ಈ ಬಗ್ಗೆ ಅವರು ಸ್ಪಷ್ಟನೆ ನೀಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಎಲ್ಲಾ ಪಕ್ಷಗಳೂ ಭರವಸೆ ನೀಡುತ್ತವೆ. ಅದೇ ರೀತಿ ನಾವು ಕೂಡಾ ಭರವಸೆ ನೀಡಿದ್ದೆವು. ನಾವು ಕೊಟ್ಟ ಭರವಸೆಗಳನ್ನು ಈಡೇರಿಸಿದ್ದೇವೆ. ತಮಿಳುನಾಡಿನ ರೀತಿ ಉಚಿತ ಯೋಜನೆಗಳು ಜಾಸ್ತಿ ಆಯ್ತು ಅಂತ ಜನ ಹೇಳುತ್ತಾರೆ ಎಂದು ಸಚಿವರು ಹೇಳಿದ್ದಾರೆ.

ನಾನು ಗಿಮಿಕ್ ಅಂತ ಎಲ್ಲೂ ಹೇಳಿಲ್ಲ. ಆ ರೀತಿ ಪ್ರಚಾರ ಮಾಡಲಾಗುತ್ತಿದೆ. ಬಿಜೆಪಿಯವರು ವೈರಲ್ ಅಲ್ದೇ ಇನ್ನೊಂದು ಮಾಡೋಕೆ ಹೇಳಿ ಎಂದು ಸಚಿವ ಚಲುವರಾಯಸ್ವಾಮಿ ಗರಂ ಆಗಿದ್ದಾರೆ.

Share Post