Bengaluru

ಟ್ರಾನ್ಸ್‌ಫಾರ್ಮರ್‌ ಸ್ಫೋಟ; ತಾಯಿ-ಮಗಳಿಗೆ ಗಂಭೀರ ಗಾಯ

ಬೆಂಗಳೂರು: ಕಲ್ಯಾಣ ಮಂಟಪ ಬುಕ್‌ ಮಾಡಲು ಹೋಗಿದ್ದ ತಂದೆ-ಮಗಳು ವಿದ್ಯುತ್‌ ಅವಘಡದಲ್ಲಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ಮಂಗನಹಳ್ಳಿಯಲ್ಲಿ ನಡೆದಿದೆ‌.

ಯುವತಿ ಚೈತನ್ಯ(25), ಅವರ ತಂದೆ ಶಿವರಾಜ್(55) ತೀವ್ರವಾಗಿ ಗಾಯಗೊಂಡವರು. ಕೆಲವೇ ದಿನಗಳಲ್ಲಿ ಶಿವರಾಜ್‌ ಮಗಳ ಮದುವೆ ಇತ್ತು. ಈ ಕಾರಣದಿಂದಾಗಿ ತಂದೆ-ಮಗಳು ಕಲ್ಯಾಣ ಮಂಟಪ ಬುಕ್‌ ಮಾಡಲು ಸ್ಕೂಟಿಯಲ್ಲಿ ನೈಸ್‌ರಸ್ತೆಯ ಮಂಗನಹಳ್ಳಿ ಬಳಿ ಹೋಗುತ್ತಿದ್ದರು. ಇದೇ ವೇಳೆ ರಸ್ತೆ ಬದಿ ಇದ್ದ ವಿದ್ಯುತ್‌ ಪರಿವರ್ತಕ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಶಿವರಾಜ್​ ಹಾಗೂ ಚೈತನ್ಯರಿಗೆ ಗಂಭೀರ ಸುಟ್ಟ ಗಾಯಗಳಾಗಿವೆ. ರಸ್ತೆ ಮೇಲೆ ಒದ್ದಾಡುತ್ತಿದ್ದ ಇಬ್ಬರನ್ನೂ ಸ್ಥಳೀಯರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ.

Share Post