BengaluruPoliticsSports

ಸಿಎಂ, ಡಿಸಿಎಂ ಪಾಕಿಸ್ತಾನ ತಂಡ ಬೆಂಬಲಿಸೋದಕ್ಕೆ ಹೋಗಿದ್ರಾ..?;ಹೆಚ್ಡಿಕೆ ಪ್ರಶ್ನೆ

ಬೆಂಗಳೂರು; ನಿನ್ನೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ನಡುವಿನ ಕ್ರಿಕೆಟ್‌ ಪಂದ್ಯವನ್ನು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ವೀಕ್ಷಿಸಿದ್ದರು. ಇದನ್ನು ಮಾಜಿ ಸಿಎಂ ಕುಮಾರಸ್ವಾಮಿ ವ್ಯಂಗ್ಯ ಮಾಡಿದ್ದಾರೆ. ಅವರು ಯಾವ ತಂಡಕ್ಕೆ ಬೆಂಬಲ ಕೊಡೋದಕ್ಕೆ ಹೋಗಿದ್ದರು..? ಪಾಕಿಸ್ತಾನಕ್ಕಾ ಅಥವಾ ಆಸ್ಟ್ರೇಲಿಯಾಗಾ ಎಂದು ಪ್ರಶ್ನೆ ಮಾಡಿದ್ದಾರೆ.

ರಾಜ್ಯದಲ್ಲಿ ಜನ ಸಾಕಷ್ಟು ಸಮಸ್ಯೆಗಳಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ವಿದ್ಯುತ್‌ ಪೂರೈಕೆ ಸರಿಯಾಗಿಲ್ಲದೆ ರೈತರು ಪರದಾಡುತ್ತಿದ್ದಾರೆ. ಜನರ ಸಮಸ್ಯೆಗಳ ಬಗ್ಗೆ ಚಿಂತನೆ ನಡೆಸುವ ಬದಲು ನಮ್ಮ ನಾಯಕರು ಕ್ರಿಕೆಟ್‌ ನೋಡಲು ಹೋಗಿದ್ದಾರೆ.

ಭಾರತ ತಂಡ ಆಡುವಾಗ ಬೆಂಬಲ ಕೊಡುತ್ತಿದ್ದರೆ ಪರವಾಗಿಲ್ಲ. ಆದ್ರೆ ಬೇರೆ ಮ್ಯಾಚ್ ನೋಡೋದಕ್ಕೆ ಸಿಎಂ, ಡಿಸಿಎಂ, ಪಟಾಲಂ ಹೋಗಿದೆ. ಬರದ ಸಮಸ್ಯೆ ಇದ್ದರೂ ಮ್ಯಾಚ್ ನೋಡೋಕೆ ಹೋಗೋದು ಎಷ್ಟು ಸರಿ? ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.

 

Share Post