Bengaluru

ಸೆರೆ ಸಿಕ್ಕಿದ್ದ ಚಿರತೆ ಸಾವನ್ನಪ್ಪಿತೇ..?; ನಿಜವಾಗಲೂ ಅಲ್ಲಿ ನಡೆದಿದ್ದೇನು..?

ಬೆಂಗಳೂರು; ಕಳೆದ ಕೆಲ ದಿನಗಳಿಂದ ಜನರ ನಿದ್ದೆಗೆಡಿಸಿದ್ದ ಚಿರತೆಯನ್ನು ಹಿಡಿಯಲಾಗಿದೆ. ಆದ್ರೆ ಅದು ಸಾವನ್ನಪ್ಪಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಚಿರತೆಯನ್ನು ಕೊಲ್ಲಲಾಗಿದೆಯೇ ಎಂಬ ಅನುಮಾನ ಕೂಡಾ ಮೂಡುತ್ತಿದೆ. ಆದ್ರೆ ಈ ಸುದ್ದಿಯನ್ನು ಇನ್ನೂ ಯಾರೂ ಖಚಿತಪಡಿಸಿಲ್ಲ.

ಬೊಮ್ಮನಹಳ್ಳಿಯ ಕೃಷ್ಣಾರೆಡ್ಡಿ ಲೇಔಟ್ ಕೈಗಾರಿಕಾ ಪ್ರದೇಶದಲ್ಲಿ ಇಂದು ಕಾರ್ಯಾಚರಣೆ ನಡೆಯಿತು. ಈ ವೇಳೆ ಚಿರತೆ ಟಾಸ್ಕ್‌ಫೋರ್ಸ್‌ ಸಿಬ್ಬಂದಿಯೊಬ್ಬರನ್ನು ಪರಚಿ ಹೋಗಿತ್ತು.  ಅರಿವಳಿಕೆ ಮದ್ದು ನೀಡಿದರೂ ಆ ಚಿರತೆ ಅದಕ್ಕೆ ಬಗ್ಗಿರಲಿಲ್ಲ. ಹೀಗಾಗಿ ಅದನ್ನು ಅರಣ್ಯ ಸಿಬ್ಬಂದಿಯೇ ಗುಂಡಿಕ್ಕಿ ಸಾಯಿಸಿದರೇ ಎಂಬ ಪ್ರಶ್ನೆ ಎದ್ದಿದೆ.

ಆದ್ರೆ, ಸಿಬ್ಬಂದಿ ಮೇಲೆ ಚಿರತೆ ದಾಳಿ ಮಾಡಿದ್ದು ನಿಜ, ಆದ್ರೆ ನಂತರ ಅದನ್ನು ಹಿಡಿಯಲಾಯಿತು ಎಂದು ಹೇಳಲಾಗಿತ್ತು. ಆದ್ರೆ ಇದೀಗ ಅದರ ಸಾವಿನ ಬಗ್ಗೆ ಮಾಹಿತಿ ಹರಿದಾಡುತ್ತಿದೆ.

Share Post