BengaluruCrime

ಲಕ್ಷ್ಮೀ ಪೂಜೆಗೆ ಇಟ್ಟಿದ್ದ ವಜ್ರ ಹಾಗೂ ಚಿನ್ನಾಭರಣ ಕಳವು!

ಬೆಂಗಳೂರು; ದೀಪಾವಳಿ ಹಬ್ಬದ ಹಿನ್ನೆಲೆಯುಲ್ಲಿ ಲಕ್ಷ್ಮೀ ಪೂಜೆಗೆಂದು ಇಟ್ಟಿದ್ದ ವಜ್ರ ಹಾಗೂ ಚಿನ್ನಾಭರಣಗಳನ್ನು ಕಳವು ಮಾಡಲಾಗಿದೆ. ಆರ್‌ಆರ್‌  ನಗರ ವ್ಯಾಪ್ತಿಯ ಜವರೇಗೌಡ ನಗರದ ಅಪಾರ್ಟ್‌ಮೆಂಟ್‌ನಲ್ಲಿ ಈ ಘಟನೆ ನಡೆದಿದೆ. 

ಪ್ರೀತಿ ಎಂಬವವರಿಗೆ ಸೇರಿದ ಫ್ಲ್ಯಾಟ್‌ನಲ್ಲಿ ವಜ್ರ ಹಾಗೂ ಚಿನ್ನಾಭರಣವನ್ನು ಲಕ್ಷ್ಮೀ ಪೂಜೆಗೆ ಇಡಲಾಗಿತ್ತು.  ಒಂದು ಜೊತೆ ಚಿನ್ನದ ಬಳೆ, ಒಂದು ಚಿನ್ನದ ಪೆಂಡೆಂಟ್, ಎರಡು ಜೊತೆ ವಜ್ರದ ಸ್ಟಡ್ಸ್, ಮಾಂಗಲ್ಯ ಸರ, ಎರಡು ಜೊತೆ ಕಿವಿ ಓಲೆ ಹಾಗೂ ವಜ್ರದ ಓಲೆಗಳನ್ನು ದೇವರ ಮುಂದೆ ಇಡಲಾಗಿತ್ತು. ಕಳ್ಳರು ಇವೆಲ್ಲವನ್ನೂ ಕದ್ದೊಯ್ದಿದ್ದಾರೆ ಎಂದು ತಿಳಿದುಬಂದಿದೆ.

ಪೂಜೆಯ ನಂತರ ಮನೆಯವರು ಹೊರಗೆ ಹೋಗಿದ್ದರು. ನಂತರ ವಾಪಸ್‌ ಮನೆಗೆ ಬರುವಷ್ಟರಲ್ಲಿ ಎಲ್ಲವೂ ಕಳುವಾಗಿವೆ.  ಈ ಬಗ್ಗೆ ಆರ್‌ಆರ್‌ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

 

Share Post