Bengaluru

ರಾಮನಗರದ ಜನತೆ ಎದುರು ಬಿಜೆಪಿಯ ಹೀನ ಸಂಸ್ಕೃತಿ ಬಯಲಾಗಿದೆ:ಕಾಂಗ್ರೆಸ್

ಬೆಂಗಳೂರು: ರಾಮನಗರದಲ್ಲಿ ಸರ್ಕಾರದ ಕಾರ್ಯಕ್ರಮದ ವೇಳೆ ಬಿಜೆಪಿ ಹಾಗೂ ಕಾಂಗ್ರೆಸ್‌ ನಾಯಕರ ಗಲಾಟೆ ತಾರಕಕ್ಕೇರಿದ. ಘಟನೆ ಬಳಿಕ ಕಾಂಗ್ರೆಸ್-ಬಿಜೆಪಿ ನಾಯಕರು ಒಬ್ಬರ ಮೇಲೊಬ್ಬರು ಆರೋಪ-ಪ್ರತ್ಯಾರೋಪಗಳನ್ನು ಮಾಡ್ತಿದ್ದಾರೆ. ಟ್ವೀಟ್‌ ಮತ್ತು ಬಹಿರಂಗ ಹೇಳಿಕೆಗಳನ್ನು ನೀಡುತ್ತಾ ಕೈ ಮತ್ತು ಕಮಲ ನಾಯಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇಂದು ನಡೆದ ಘಟನೆ ಬಗ್ಗೆ ಹೆಸರು ಹೇಳದೆ ಪರೋಕ್ಷವಾಗಿ ಟ್ವೀಟ್‌ ಮಾಡಿರುವ ರಾಜ್ಯ ಕಾಂಗ್ರೆಸ್‌ ಘಟಕ ಸಂಸ್ಕೃತಿ ಹೀನ ಸಚಿವ ಹ್ಯಾಶ್‌ ಟ್ಯಾಗ್‌ ಅಡಿಯಲ್ಲಿ ಪ್ರತಿಮೆ ನಿರ್ಮಾಣಕ್ಕೆ ಒಂದು ರೂಪಾಯಿ ನೀಡದೆ ಬಿಟ್ಟಿ ಪ್ರಚಾರಕ್ಕೆ ಯತ್ನಿಸಿದ್ದಾರೆ. ಸರ್ಕಾರದ ಕಾರ್ಯಕ್ರಮದಲ್ಲಿ ಸ್ವಪಕ್ಷದ ಪ್ರಚಾರವನ್ನು ಮಾಡಿಕೊಂಡಿದ್ದಾರೆ. ತಮ್ಮದೇ ಮುಖ್ಯಮಂತ್ರಿಗಳ ಎದುರು ಅಸಭ್ಯ ಪದ ಪ್ರಯೋಗ ಮಾಡುವವರನ್ನು ಏನನ್ನಬೇಕೊ ಗೊತ್ತಿಲ್ಲ. ಇಂದು ಇಡೀ ರಾಮನಗರದ ಜನತೆ ಎದುರು RSSನ ನಿಜವಾದ ಸಂಸ್ಕೃತಿಯನ್ನು ತೆರೆದಿಟ್ಟ #ಸಂಸ್ಕೃತಿ_ಹೀನ_ಸಚಿವ! ಎಂದು ಪೋಸ್ಟ್‌ ಹಾಕಿ ಕಿಡಿ ಕಾರಿದ್ದಾರೆ.

Share Post