BengaluruPolitics

ಪದ್ಮನಾಭನಗರ ಅಭ್ಯರ್ಥಿ ಬದಲಿಸುತ್ತಾ ಕಾಂಗ್ರೆಸ್‌; ಘೋಷಿತ ಅಭ್ಯರ್ಥಿ ಸಿಗದ ಬಿ ಫಾರ್ಮ್‌

ಬೆಂಗಳೂರು; ಬೆಂಗಳೂರಿನ ಪದ್ಮನಾಭ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಬದಲಾವಣೆ ಮಾಡುವ ಸಾಧ್ಯತೆ ಇದೆ. ಈ ಕಾರಣಕ್ಕಾಗಿ ಘೋಷಿತ ಅಭ್ಯರ್ಥಿಗೆ ಇನ್ನೂ ಬಿ ಫಾರ್ಮ್‌ ವಿತರಣೆ ಮಾಡಿಲ್ಲ. ಮೊನ್ನೆ ಹಾಲಿ ಅಭ್ಯರ್ಥಿ ರಘುನಾಥ್‌ ನಾಯ್ಡುಗೆ ಟಿಕೆಟ್‌ ನೀಡಿ ಫೋಟೋ ತೆಗೆಸಿಕೊಂಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅದನ್ನು ವಾಪಸ್‌ ಪಡೆದಿದ್ದಾರೆ ಎನ್ನಲಾಗಿದೆ. ಅಭ್ಯರ್ಥಿ ಬದಲಾವಣೆಗೆ ಚಿಂತಿಸುತ್ತಿದ್ದು, ಒಂದು ವೇಳೆ ಅಭ್ಯರ್ಥಿ ಬದಲಾಗದಿದ್ದರೆ ನಿಮಗೇ ಟಿಕೆಟ್‌ ನೀಡುವುದಾಗಿ ರಘುನಾಥ್‌ ನಾಯ್ಡುಗೆ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ ಎನ್ನಲಾಗಿದೆ. ಈ ಕಾರಣಕ್ಕಾಗಿ ಆರ್‌.ಅಶೋಕ್‌ ವಿರುದ್ಧ ಕಾಂಗ್ರೆಸ್‌ ಯಾರನ್ನು ಕಣಕ್ಕಿಳಿಸುತ್ತೆ ಎಂಬ ಕುತೂಹಲ ಹೆಚ್ಚಿದೆ.

ಆರ್‌.ಅಶೋಕ್‌ ಅವರಿಗೆ ಪದ್ಮನಾಭನಗರದ ಜೊತೆ ಕನಕಪುರ ಕ್ಷೇತ್ರದಲ್ಲೂ ಟಿಕೆಟ್‌ ನೀಡಲಾಗಿದೆ. ಹೀಗಾಗಿ ಪದ್ಮನಾಭನಗರದಲ್ಲಿ ಆರ್‌.ಅಶೋಕ್‌ರನ್ನು ಕಟ್ಟಿಹಾಕಲು ಕಾಂಗ್ರೆಸ್‌ ಕಸರತ್ತು ಮಾಡಿದಂತೆ ಕಾಣುತ್ತಿದೆ. ಪದ್ಮನಾಭನಗರದಲ್ಲಿ ಸಂಸದ ಡಿ.ಕೆ.ಸುರೇಶ್‌ ಅವರನ್ನು ನಿಲ್ಲಿಸುವಂತೆ ಒತ್ತಡ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ನಾಯಕರು ಚರ್ಚೆ ನಡೆಸಿದ್ದಾರೆ. ಹೈಕಮಾಂಡ್‌ ಡಿ.ಕೆ.ಸುರೇಶ್‌ ಸ್ಪರ್ಧೆಗೆ ಅಸ್ತು ಎಂದರೆ, ಪದ್ಮನಾಭನಗರದಲ್ಲಿ ಬಿಗ್‌ ಫೈಟ್‌ ನಡೆಯೋದಂತೂ ಸತ್ಯ.

Share Post