BengaluruPolitics

ಜೆಡಿಎಸ್‌ನಿಂದ ಬಂದ ಐವರಿಗೆ ಕಾಂಗ್ರೆಸ್‌ ಟಿಕೆಟ್‌

ಬೆಂಗಳೂರು; ಕಾಂಗ್ರೆಸ್‌ ಎರಡನೇ ಪಟ್ಟಿ ಪ್ರಕಟವಾಗಿದೆ. ಇದರಲ್ಲಿ ಜೆಡಿಎಸ್‌ನಿಂದ ಬಂದ ಐವರಿಗೆ ಟಿಕೆಟ್‌ ಘೋಷಣೆ ಮಾಡಲಾಗಿದೆ. ಆದ್ರೆ ಕಡೂರು ಟಿಕೆಟ್‌ ಆಕಾಂಕ್ಷಿಯಾಗಿದ್ದ ವೈಎಸ್‌ವಿ ದತ್ತಾಗೆ ಟಿಕೆಟ್‌ ನಿರಾಕರಿಸಲಾಗಿದೆ. ಈ ಬಾರಿ ಕಾಂಗ್ರೆಸ್‌ ಅಧಿಕಾರ ಬರುತ್ತೆ, ಗೆದ್ದರೆ ಮಂತ್ರಿಯಾಗಬಹುದು ಎಂಬ ನಿರೀಕ್ಷೆಯಲ್ಲಿ ವೈಎಸ್‌ವಿ ದತ್ತಾ ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರಿದ್ದರು. ಆದ್ರೆ ಅವರಿಗೆ ಈ ಟಿಕೆಟ್‌ ಘೋಷಣೆಯಾಗಿಲ್ಲ. ಉಳಿದಂತೆ ಗಂಗಾವತಿಯಿಂದ ಇಕ್ಬಾಲ್‌ ಅನ್ಸಾರಿ, ಕೆ.ಆರ್‌.ಪೇಟೆಯಿಂದ ಬಿ.ಎಲ್‌.ದೇವರಾಜು, ಚಿತ್ರದುರ್ಗದಿಂದ ಕೆ.ಸಿ.ವೀರೇಂದ್ರ, ಗುಬ್ಬಿಯಿಂದ ಎಸ್‌.ಆರ್‌.ಶ್ರೀನಿವಾಸ್‌ ಹಾಗೂ ಚಾಮುಂಡೇಶ್ವರಿಯಿಂದ ಸಿದ್ದೇಗೌಡರಿಗೆ ಟಿಕೆಟ್‌ ನೀಡಲಾಗಿದೆ.

ಗಂಗಾವತಿ – ಇಕ್ಬಾಲ್‌ ಅನ್ಸಾರಿ

ಕೆ.ಆರ್‌.ಪೇಟೆ – ಬಿ,ಎಲ್‌.ದೇವರಾಜು

ಚಿತ್ರದುರ್ಗ – ಕೆ.ಸಿ.ವೀರೇಂದ್ರ

ಗುಬ್ಬಿ – ಎಸ್‌.ಆರ್‌.ಶ್ರೀನಿವಾಸ್‌

ಚಾಮುಂಡೇಶ್ವರಿ – ಸಿದ್ದೇಗೌಡ

Share Post