Bengaluru

ಚಂದ್ರು ಕೊಲೆ ಪ್ರಕರಣ; ತನಿಖೆ ಚುರುಕುಗೊಳಿಸಿದ ಸಿಐಡಿ ಪೊಲೀಸರು

ಬೆಂಗಳೂರು: ಗೋರಿಪಾಳ್ಯದ ಜೆಜೆ ನಗರದಲ್ಲಿ ನಡೆದ ಚಂದ್ರು ಕೊಲೆ ಪ್ರಕರಣದ ಸಂಬಂಧ ಸಿಐಡಿ ಅಧಿಕಾರಿಗಳು ತನಿಖೆ ತೀವ್ರಗೊಳಿಸಿದ್ದಾರೆ. ಇಂದು ಪ್ರಕರಣದ ಸಾಕ್ಷಿ ಹಾಗೂ ದೂರುದಾರನೂ ಆಗಿರುವ ಸೈಮನ್‌ ರಾಜ್‌ನನ್ನು ಸಿಐಡಿ ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ.

ಉರ್ದು ಮಾತನಾಡಲು ಬರದಿದ್ದಕ್ಕೆ ಚಂದ್ರು ಕೊಲೆ ಮಾಡಲಾಗಿದೆ ಎಂದು ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಸರ್ಕಾರ ಸಿಐಡಿ ತನಿಖೆಗೆ ಒಪ್ಪಿಸಿತ್ತು. ತನಿಖೆಯ ನೇತೃತ್ವ ವಹಿಸಿರುವ ಡಿವೈಎಸ್‌ಪಿ ತಿಮ್ಮಯ್ಯ ಅವರು ಈಗಾಗಲೇ ಕೊಲೆ ಸಂಬಂದ ಪೂರಕ ಸಾಕ್ಷ್ಯಗಳನ್ನು ಸಂಗ್ರಹ ಮಾಡಿದ್ದಾರೆ. ಇದೀಗ ಅವರು ಪ್ರಮುಖ ಸಾಕ್ಷಿ ಸೈಮನ್‌ ರಾಜ್‌ ಹಾಗೂ ಚಂದ್ರು ಚಂದ್ರು ಕುಟುಂಬಸ್ಥರನ್ನು ಭೇಟಿಯಾಗಿ, ಪ್ರಕರಣದ ಸಂಬಂದ ಮಾಹಿತಿ ಕಲೆ ಹಾಕಲಿದ್ದಾರೆ.

 

Share Post