Bengaluru

ನನ್ನಿಂದ ತಪ್ಪಾಗಿದೆ ಎಂದ ಆರಗ ಜ್ಞಾನೇಂದ್ರ; ಮೊದಲು ಹಾಗೆ ಹೇಳಿದ್ದು ಯಾಕೆ..?

ಬೆಂಗಳೂರು; ಗೋರಿಪಾಳ್ಯದ ಚಂದ್ರು ಕೊಲೆ ಪ್ರಕರಣ ಸಂಬಂಧ ಬೆಳಗ್ಗೆ ಹೇಳಿಕೆ ನೀಡಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ಉರ್ದು ಮಾತನಾಡದಿದ್ದಕ್ಕೆ ಚಂದ್ರು ಕೊಲೆಯಾಗಿದೆ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ, ಗೃಹ ಸಚಿವರು ತಮ್ಮ ಹೇಳಿಕೆ ಬದಲಿಸಿದ್ದಾರೆ. ಎರಡನೇ ಹೇಳಿಕೆ ಕೊಟ್ಟಿದ್ದು, ಅದರಲ್ಲಿ ಉರ್ದು ವಿಚಾರವನ್ನು ಮಾತನಾಡಿಲ್ಲ. ಬದಲಾಗಿ, ಬೈಕ್‌ಗೆ ಡಿಕ್ಕಿ ಹೊಡೆದ ಕಾರಣಕ್ಕಾಗಿ ಜಗಳ ನಡೆದು ಕೊಲೆಯಾಗಿದೆ ಎಂದಷ್ಟು ಹೇಳಿದ್ದಾರೆ. ಈ ಮೂಲಕ ಬೆಳಗ್ಗೆ ತಾವು ನೀಡಿದ್ದ ಹೇಳಿಕೆಯನ್ನು ಆರಗ ಜ್ಞಾನೇಂದ್ರ ಪರಿಸ್ಥಿತಿ ಅರಿತು ಸರಿ ಮಾಡಿಕೊಂಡಿದ್ದಾರೆ.

ಘಟನೆ ಬಗ್ಗೆ ಬೆಳಗ್ಗೆಯೇ ಪೊಲೀಸರು ಗೃಹ ಸಚಿವರಿಗೆ ಮಾಹಿತಿ ನೀಡಿದ್ದರು. ಮಾಹಿತಿ ಪಡೆದುಕೊಂಡಿದ್ದ ಆರಗ ಜ್ಞಾನೇಂದ್ರ ಅವರು, ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ಈ ವೇಳೆ ಉರ್ದು ವಿಚಾರ ಮಾತನಾಡಿದ್ದರು. ಇದನ್ನು ಕೇಳಿ ಪೊಲೀಸ್‌ ಅಧಿಕಾರಿಗಳೇ ಕಕ್ಕಾಬಿಕ್ಕಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಮಾತನಾಡಿರುವ ಜ್ಞಾನೇಂದ್ರ, ನಾನು ತಕ್ಷಣದ ಮಾಹಿತಿಯಿಂದ ಆ ರೀತಿ ಹೇಳಿಕೆ ನೀಡಿದ್ದೆ. ನನ್ನ ಹೇಳಿಕೆಯಲ್ಲಿ ತಪ್ಪಾಗಿದೆ ಎಂದು ಹೇಳಿದ್ದಾರೆ.

 

Share Post