BengaluruCrime

ಉದ್ಯಾನನಗರಿಯಲ್ಲಿ ಮತ್ತೆ ಚಡ್ಡಿ ಗ್ಯಾಂಗ್‌ ಹಾವಳಿ; ಆಯುಧ ಹಿಡಿದು ರಾಬರಿ

ಬೆಂಗಳೂರು; ಚಡ್ಡಿ ಗ್ಯಾಂಗ್‌ ಬೆಂಗಳೂರಿನಲ್ಲಿ ಮತ್ತೆ ತನ್ನ ಕೈಚಳಕ ತೋರಿಸುತ್ತಿದೆ. ಸರ್ಜಾಪುರ ರಸ್ತೆ ಸುತ್ತಮುತ್ತ ಮಾರಕಾಸ್ತ್ರಗಳನ್ನು ಹಿಡಿದು ರಾಬರಿ ನಡೆಸುತ್ತಿದ್ದು, ಈ ಗ್ಯಾಂಗ್‌ನ ಕೃತ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಆನೆಕಲ್‌ ತಾಲ್ಲೂಕಿನ ಹಲವೆಡೆ ಈ ಗ್ಯಾಂಗ್‌ ಕಾರ್ಯಪ್ರವೃತ್ತವಾಗಿದೆ, ಸರ್ಜಾಪುರ ಮಾರ್ಗದಲ್ಲಿ ಬರುವ ಗುಟ್ಟಹಳ್ಳಿ, ದೊಡ್ಡ ತಿಮ್ಮಸಂದ್ರದ ಬಳಿಯ ವಿಲ್ಲಾಗಳಲ್ಲಿ ರಾತ್ರಿ ವೇಳೆ ಕಳ್ಳತನಗಳು, ರಾಬರಿಗಳು ನಡೆಯುತ್ತಿವೆ. ಹೀಗಾಗಿ ಸಿಸಿಟಿವಿ ಪರಿಶೀಲನೆ ನಡೆಸಿದಾಗ ಚಡ್ಡಿ ಗ್ಯಾಂಗ್‌ ಕೈವಾಡ ಬಯಲಾಗಿದೆ,

ವಿಲ್ಲಾ, ಅಪಾರ್ಟ್‌ಮೆಂಟ್‌ಗಳ ಸುತ್ತಮುತ್ತ ಚಡ್ಡ ಗ್ಯಾಂಗ್‌ ಕಳೆದ ಮೂರು ನಾಲ್ಕು ದಿನಗಳಿಂದ ಕಳ್ಳತನಕ್ಕೆ ಯತ್ನಿಸುತ್ತಿತ್ತು. ಅವರ ಚಲನವಲನಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದರಿಂದಾಗಿ ಸ್ಥಳೀಯ ನಿವಾಸಿಗಳು ಆತಂಕಗೊಂಡಿದ್ದಾರೆ. ಗ್ಯಾಂಗ್‌ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಸೂಕ್ತ ಭದ್ರತೆ ಒದಗಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

ಚಡ್ಡಿ ಗ್ಯಾಂಗ್‌ ಗುರುತು ಸಿಗದಂತೆ ಮುಖಕ್ಕೆ ಕರ್ಚೀಫ್‌ ಕಟ್ಟಿಕೊಂಡು ಕೈಯಲ್ಲಿ ಮಾರಕಾಸ್ತ್ರ ಹಿಡಿದುಕೊಂಡು ತಿರುಗಾಡುತ್ತದೆ. ಈ ಗ್ಯಾಂಗ್‌ ಫೀಲ್ಡಿಗಿಳಿಯಿತು ಅಂದ್ರೆ ಶರವೇಗದಲ್ಲಿ ದೋಚಿಕೊಂಡು ಪರಾರಿಯಾಗುತ್ತೆ. ಈ ಹಿಂದೆ ಇಂತಹ ಘಟನೆಗಳು ಬೆಂಗಳೂರಿನಲ್ಲಿ ಹಲವಾರು ನಡೆದಿವೆ. ಹೀಗಾಗಿಯೇ ಸಾರ್ವಜನಿಕರು ಆತಂಕಗೊಂಡಿದ್ದಾರೆ.

Share Post