BengaluruCrime

ಸಂಸದ ತೇಜಸ್ವಿ ಸೂರ್ಯ ನಂಬರ್‌ನಿಂದ ಕರೆ; ಹಣ ಹಾಗೂ ವಜ್ರಕ್ಕೆ ಬೇಡಿಕೆ !

ಬೆಂಗಳೂರು; ಬಿಜೆಪಿ ಯುವ ಘಟಕದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರ ಮೊಬೈಲ್‌ ನಂಬರ್‌ ದುರುಪಯೋಗ ಆಗಿರುವ ಬಗ್ಗೆ ದೂರು ದಾಖಲಾಗಿದೆ. ತೇಜಸ್ವಿ ಸೂರ್ಯ ಅವರ ಅಧಿಕೃತ ಫೋನ್‌ ನಂಬರ್‌ ದುರುಪಯೋಗ ಮಾಡಿಕೊಂಡಿರುವ ಅಪರಿಚಿತ ವ್ಯಕ್ತಿಯೊಬ್ಬ, ಗುಜರಾತ್‌ ಘಟಕದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪ್ರಶಾಂತ್‌ ಕೋರಟ್‌ಗೆ ಕರೆ ಮಾಡಿ ಹಣ ಹಾಗೂ ವಜ್ರಕ್ಕೆ ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ. ಈ ಬಗ್ಗೆ ತೇಜಸ್ವಿ ಸೂರ್ಯ ಅವರು ದಕ್ಷಿಣ ವಿಭಾಗದ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಜುಲೈ 1ರಂದು ಅಪರಿಚಿತನೊಬ್ಬ ತೇಜಸ್ವಿಯವರ ಅಧಿಕೃತ ನಂಬರ್‌ನಿಂದ ಕರೆ ಮಾಡಿ ಗುಜರಾತ್‌ ಯುವ ಬಿಜೆಪಿ ನಾಯಕನಿಗೆ ಹಣ ಹಾಗೂ ವಜ್ರದ ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ. ಇದಾದ ಬಳಿಕ ಪ್ರಶಾಂತ್‌ ಕೋರಟ್‌ ಅವರು ವಾಪಸ್‌ ತೇಜಸ್ವಿ ಸೂರ್ಯ ಅವರಿಗೆ ಮಾಡಿ ಈ ಬಗ್ಗೆ ಮಾತನಾಡಿದ್ದಾರೆ. ಆಗ ಅಪಚಿತ ವ್ಯಕ್ತಿ ಫೋನ್‌ ದುರ್ಬಳಕೆ ಮಾಡಿಕೊಂಡಿರುವುದು ಬಯಲಾಗಿದೆ. ಕೂಡಲೇ ತೇಜಸ್ವಿ ಸೂರ್ಯ ಪಿಎ ಜುಲೈ 4 ರಂದು ಪೊಲೀಸರಿಗೆ ದೂರು ನೀಡಿದ್ದಾರೆ.

Share Post