BengaluruCinema

ಬಾಲಿವುಡ್‌, ಟಾಲಿವುಡ್‌ನಿಂದ ಆಫರ್‌ ಬಂದಿದೆ; ಸದ್ಯಕ್ಕೆ ಇಲ್ಲೇ ಇರುತ್ತೇನೆ ಎಂದ ರಿಷಬ್‌

ಬೆಂಗಳೂರು; ನನಗೆ ಬಾಲಿವುಡ್‌ ಹಾಗೂ ಟಾಲಿವುಡ್‌ನಿಂದ ಆಫರ್‌ ಬಂದಿದ್ದು ನಿಜ ಎಂದು ಕಾಂತಾರಾ ನಿರ್ದೇಶಕ ರಿಷಬ್‌ ಶೆಟ್ಟಿ ಹೇಳಿದ್ದಾರೆ. ಆದ್ರೆ ನಾನು ಸದ್ಯಕ್ಕೆ ಎಲ್ಲಿಯೂ ಹೋಗುವುದಿಲ್ಲ. ಕನ್ನಡದಲ್ಲೇ ಮಾಡುವುದಕ್ಕೆ ತುಂಬಾ ಕೆಲಸಗಳಿವೆ. ಇಲ್ಲಿಯೇ ಇನ್ನಷ್ಟು ಸಿನಿಮಾಗಳನ್ನು ಮಾಡುತ್ತೇನೆ ಎಂದು ರಿಷಬ್‌ ಹೇಳಿದ್ದಾರೆ.

ನಾನು ಯಾವಾಗಲೂ ಅಮಿತಾಭ್ ಬಚ್ಚನ್ ಬಗ್ಗೆ ಅಭಿಮಾನ ಹೊಂದಿದ್ದೇನೆ. ಈಗಿನ ನಟರಾದ ಶಾಹಿದ್ ಕಪೂರ್ ಮತ್ತು ಶಾರುಖ್ ಖಾನ್ ಬಗ್ಗೆಯೂ ನನಗೆ ಪ್ರೀತಿ ಇದೆ ಎಂದು ರಿಷಬ್‌ ಹೇಳಿದ್ದಾರೆ. ಎಲ್ಲ ಸಿನಿಮಾ ರಂಗದ ಬಗ್ಗೆಯೂ ನನಗೆ ಅಭಿಮಾನವಿದೆ. ಆದ್ರೆ ಕನ್ನಡದಲ್ಲೇ ಸಿನಿಮಾ ಮಾಡಿ, ಇತರೆ ಚಿತ್ರರಂಗಗಳನ್ನೂ ಗೌರವಿಸುವುದಾಗಿ ಹೇಳಿದ್ದಾರೆ.

Share Post