BengaluruPolitics

ಸಿದ್ದರಾಮಯ್ಯ ಬಗ್ಗೆ ಬಿ.ಕೆ.ಹರಿಪ್ರಸಾದ್‌ ವಾಗ್ದಾಳಿ ವಿಚಾರ; ಸಚಿವ ದಿನೇಶ್‌ ಗುಂಡೂರಾವ್‌ ಬೇಸರ

ಮಂಗಳೂರು; ಶನಿವಾರ ಬೆಂಗಳೂರಿನಲ್ಲಿ ನಡೆದ ಅತ್ಯಂತ ಹಿಂದುಳಿದ ವರ್ಗಗಳ ಸಭೆಯಲ್ಲಿ ವಿಧಾನಪರಿಷತ್‌ ಸದಸ್ಯ ಬಿ.ಕೆ.ಹರಿಪ್ರಸಾದ್‌ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದಕ್ಕೆ ಸಚಿವ ದಿನೇಶ್‌ ಗುಂಡೂರಾವ್‌ ಬೇಸರ ಹೊರಹಾಕಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿರುವ ಅವರು, ಒಬ್ಬ ಪ್ರಮುಖ, ಪ್ರಭಾವಿ ರಾಜಕಾರಿಣಿ ಆ ರೀತಿಯಲ್ಲಿ ಮಾತನಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಬಿ.ಕೆ.ಹರಿಪ್ರಸಾದ್‌ ಅವರು ಯಾರ ಬಗ್ಗೆ ಟೀಕೆ ಮಾಡುತ್ತಾರೆ, ಯಾಕಾಗಿ ಟೀಕೆ ಮಾಡುತ್ತಾರೆ ಅನ್ನೋದೇ ಅರ್ಥವಾಗ್ತಿಲ್ಲ. ಹರಿಪ್ರಸಾದ್‌ ಅವರಿಗೆ ಯಾಕೆ ಅಸಮಾಧಾನ ಆಗಿದೆ. ಅದಕ್ಕೆ ಕಾರಣ ಏನು ಅನ್ನೋದೂ ಗೊತ್ತಾಗುತ್ತಿಲ್ಲ ಎಂದು ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ. ಹೈಕಮಾಂಡ್‌ ಹರಿಪ್ರಸಾದ್‌ ಅವರಿಗೆ ಸೂಚನೆ ಕೂಡಾ ಕೊಟ್ಟಿದೆ. ಏನೂ ಮಾತನಾಡಬಾರದು ಎಂದೂ ಹೇಳಿದೆ. ಹೀಗಿದ್ದರೂ ಅವರು ಮಾತನಾಡುತ್ತಿರೋದು ಸರಿಯಾದ ಕ್ರಮ ಅಲ್ಲ ಎಂದು ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.

ಸ್ಥಾನ ಸಿಗುತ್ತೆ, ಹೋಗುತ್ತೆ. ಹಾಗಂತ ಸಾರ್ವಜನಿಕ ವೇದಿಕೆಗಳಲ್ಲೆಲ್ಲಾ ಅಸಮಾಧಾನ ಹೊರಹಾಕೋದಕ್ಕೆ ಆಗುತ್ತಾ ಎಂದು ಪ್ರಶ್ನಿಸಿದ್ದಾರೆ.

 

Share Post