BengaluruPolitics

ಹತಾಶೆಯಿಂದ ಬಿಜೆಪಿಯವರ ಗೂಂಡಾವರ್ತನೆ; ಡಿಸಿಎಂ ಡಿ.ಕೆ.ಶಿವಕುಮಾರ್‌

ಬೆಂಗಳೂರು; ಬಿಜೆಪಿ ಶಾಸಕರು ಹತಾಶೆಯಿಂದ ಸದನದಲ್ಲಿ ಗೂಂಡಾವರ್ತನೆ ತೋರಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ದಲಿತ ಡೆಪ್ಯೂಟಿ ಸ್ಪೀಕರ್‌ ಮೇಲೆ ಪೇಪರ್‌ಗಳನ್ನು ಎಸೆಯಲಾಗಿದೆ. ಬಿಜೆಪಿಯವರು ಸದನದಲ್ಲಿ ಮಹಾಭಾರತದ ನಾಟಕವನ್ನೇ ತೋರಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.

ವಿಪಕ್ಷಗಳ ಸಭೆಗೆ ಬರುವ ಗಣ್ಯರನ್ನು ಸ್ವಾಗತಿಸಲು ಐಎಎಸ್‌ ಅಧಿಕಾರಿಗಳನ್ನು ಬಳಸಿಕೊಂಡಿದ್ದನ್ನ ವಿರೋಧಿಸಿ ನಿನ್ನೆ ಸದನದಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿತು. ಈ ವೇಳೆ ಕೆಲ ಬಿಜೆಪಿ ಸದಸ್ಯರು ಡೆಪ್ಯೂಟಿ ಸ್ಪೀಕರ್‌ ಮೇಲೆ ಪೇಪರ್‌ಗಳನ್ನು ಹರಿದು ಎಸೆದಿದ್ದರು. ಹೀಗಾಗಿ ಸ್ಪೀಕರ್‌ ಖಾದರ್‌ ಅವರು ಬಿಜೆಪಿಯ ಹತ್ತು ಶಾಸಕರನ್ನು ಅಮಾನತು ಮಾಡಿದ್ದರು.

ಈ ಹಿನ್ನೆಲೆಯಲ್ಲಿ ಬಿಜೆಪಿ ಪ್ರತಿಭಟನೆ ಮಾಡುತ್ತಿದೆ. ಈ ಬಗ್ಗೆ ಡಿ.ಕೆ.ಶಿವಕುಮಾರ್‌ ಪ್ರತಿಕ್ರಿಯಿಸಿದ್ದು, ಬಿಜೆಪಿ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

 

Share Post