BengaluruPolitics

ಬಿಜೆಪಿಯವರು ಕುಸ್ತಿ ಮಾಡೋರನ್ನು ಸೇರಿಸಿಕೊಳ್ಳುತ್ತಿದ್ದಾರೆ; ಡಿ.ಕೆ.ಶಿವಕುಮಾರ್‌

ಬೆಂಗಳೂರು; ಬಿಜೆಪಿಯವರಿಗೆ ಕುಸ್ತಿ ಮಾಡೋರು ಬೇಕು, ಹೀಗಾಗಿ ರೌಡಿಶೀಟರ್‌ಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಲೇವಡಿ ಮಾಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಿಜೆಪಿಗೆ ಅಂಥಹವರೇ ಬೇಕಿರೋದು. ಹೀಗಾಗಿ ಕುಸ್ತಿ ಮಾಡೋರನ್ನು ಜೊತೆಗಿಟ್ಟುಕೊಳ್ಳುತ್ತಿದ್ದಾರೆ ಎಂದು ಹೇಳಿದ್ದರು.

ಬಿಜೆಪಿಗೆ ಸಿದ್ಧಾಂತ ಎಲ್ಲಿದೆ ಎಂದು ಪ್ರಶ್ನೆ ಮಾಡಿರುವ ಡಿ.ಕೆ.ಶಿವಕುಮಾರ್‌, ಭಾವನೆಗೂ ಬದುಕಿಗೂ ವ್ಯತ್ಯಾಸ ಇದೆ. ಬಿಜೆಪಿಯವರು ಯಾವಾಗಲೂ ಭಾವನೆಗಳ ಮೇಲೆ ರಾಜಕಾರಣ ಮಾಡುತ್ತಾರೆ. ಜನ ಬದುಕನ್ನು ಗಮನವಿಟ್ಟುಕೊಂಡು ರಾಜಕಾರಣ ಮಾಡಬೇಕು. ಆಗ ಮಾತ್ರ ಜನರ ಕಷ್ಟಗಳು ಏನು ಎಂಬುದು ಅರ್ಥವಾಗುತ್ತದೆ. ಆದ್ರೆ ಬಿಜೆಪಿಯವರು ಯಾವತ್ತೂ ಬೆಲೆ ಏರಿಕೆ ಬಗ್ಗೆ ಯೋಚನೆ ಮಾಡೋದಿಲ್ಲ. ಅವರು ಯಾವತ್ತಿಗೂ ಭಾವನೆಗಳ ಬಗ್ಗೆ ಯೋಚಿಸುತ್ತಾ ಇರುತ್ತಾರೆ ಎಂದರು.

Share Post