Bengaluru

ನಿವೇಶನ ವಿಚಾರದಲ್ಲಿ ಪೊಲೀಸರಿಂದಲೇ ಮೋಸ; ಸಿಎಂ ಎದುರೇ ವೃದ್ಧ ಆತ್ಮಹತ್ಯೆ ಯತ್ನ

ಬೆಂಗಳೂರು: ವೃದ್ಧರೊಬ್ಬರು ಸಿಎಂ ಬೊಮ್ಮಾಯಿ ಎದುರೇ ವಿಷ ಕುಡಿಯಲು ಯತ್ನಿಸಿರುವ ಘಟನೆ ನಡೆದಿದೆ. ಆರ್‌ಟಿ ನಗರದ ಸಿಎಂ ಬೊಮ್ಮಾಯಿ ನಿವಾಸಕ್ಕೆ ಆಗಮಿಸಿದ್ದ ಸುಂಕದಕಟ್ಟೆಯ ನಿವಾಸಿ ಚಂದ್ರಶೇಖರ್‌ ಎಂಬುವವರು ಸಿಎಂ ಎದುರೇ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

   ನಿವೇಶನ ವಿಚಾರದಲ್ಲಿ ನನಗೆ ಅನ್ಯಾಯ ಆಗಿದೆ. ಇದ್ರಲ್ಲಿ ಪೊಲೀಸರು ಕೂಡಾ ಶಾಮೀಲಾಗಿದ್ದಾರೆ ಎಂದು ವೃದ್ಧ ಚಂದ್ರಶೇಖರ್‌ ಆರೋಪಿಸಿದ್ದಾರೆ.  ನನಗೆ ಪೊಲೀಸರಿಂದಲೇ ಅನ್ಯಾಯವಾಗಿದೆ. ಪೊಲೀಸರು ಕೆಲವರ ಜೊತೆ ಸೇರಿ ಸೈಟ್ ಮಾರಾಟದಲ್ಲಿ ಲಕ್ಷಾಂತರ ರೂ. ಮೋಸ ಮಾಡಿದ್ದಾರೆ ಎಂದು ಅನ್ನೂರ್ಣೇಶ್ವರಿ ನಗರ ಪೊಲೀಸ್ ಠಾಣೆಯ ಇನ್ಸ್​ಪೆಕ್ಟರ್​​​ ವಿರುದ್ಧ ಚಂದ್ರಶೇಖರ್‌ ಅವರು ಆರೋಪ ಮಾಡಿದ್ದಾರೆ. ಹೀಗಾಗಿ ನನಗೆ ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದಾರೆ.

ಇದೇ ವೇಳೆ ಸಿಎಂ ಜೊತೆ ಮಾತನಾಡುತ್ತಲೇ ಚಂದ್ರಶೇಖರ್‌ ಅವರು ವಿಷದ ಬಾಟಲಿ ತೆಗೆದು ಸಿಎಂಗೆ ತೋರಿಸಿ ಕುಡಿಯಲು ಯತ್ನಿಸಿದರು. ಈ ವೇಳೆ, ಪೊಲೀಸರು ತಡೆದು ವೃದ್ಧನನ್ನು ಸ್ವಲ್ಪ ದೂರಕ್ಕೆ ಕರೆದೊಯ್ದು ವಿಚಾರಣೆ ನಡೆಸಿ ಮಾಹಿತಿ ಪಡೆದುಕೊಂಡರು. ಆಗ ಈ ಕುರಿತಂತೆ ಪರಿಶೀಲನೆ ನಡೆಸುವಂತೆ ಸಿಎಂ ಅಧಿಕಾರಿಗಳಿಗೆ ಸೂಚಿಸಿದರು.

Share Post