BengaluruDistricts

ನಾಳೆ ಬೆಂಗಳೂರು – ಮೈಸೂರು ಹೆದ್ದಾರಿ ಬಂದ್

ರಾಮನಗರ : ಮೇಕೆದಾಟು ಪಾದಯಾತ್ರೆ ಈಗಾಗಲೇ ನಾಲ್ಕು ದಿನ ಯಶಸ್ವಿಯಾಗಿ ನಡೆದಿದೆ. ನಾಳೆ ಐದನೇ ದಿನವಾಗಿದ್ದು ರಾಮನಗರದ ಹೆದ್ದಾರಿಯಲ್ಲಿ ಪಾದಯಾತ್ರೆ ಸಾಗಲಿದೆ. ಇದರಿಂದ ಪೊಲೀಸ್‌ ಇಲಾಖೆಯವರು ಸಾರ್ವಜನಿಕರಿಗೆ ಮಾರ್ಗ ಬದಲಾಯಿಸುವಂತೆ ಆದೇಶ ಹೊರಡಿಸಿದ್ದಾರೆ.

ಇಂದು ರಾತ್ರಿ ರಾಮನಗರ ತಲುಪಲಿರುವ ಕಾಂಗ್ರೆಸ್‌ ತಂಡ ಅಲ್ಲಿಯೇ ವಾಸ್ತವ್ಯ ಹೂಡಲಿದೆ. ನಂತರ ನಾಳೆ ಬೆಳಗ್ಗೆ ಅಲ್ಲಿಂದ ಶುರು ಮಾಡಿ ಹೆದ್ದಾರಿಯ ಮೂಲಕವೇ ಪಾದಯಾತ್ರೆ ಸಾಗಲಿದೆ. ಬೆಂಗಳೂರಿಗೆ ತಲುಪುವವರೆಗೂ ಹೆದ್ದಾರಿಯಲ್ಲಿಯೇ ಈ ಪಾದಯಾತ್ರೆ ಸಾಗಲಿದೆ. ಇದರಿಂದ ಬದಲಿ ಮಾರ್ಗದಲ್ಲಿ ಸಂಚರಿಸುವಂತೆ ಸೂಚನೆ ನೀಡಲಾಗಿದೆ.

ಬದಲಿ ಮಾರ್ಗ

ಮಾರ್ಗ ೧ –  ಕಗ್ಗಲೀಪುರ, ಹಾರೋಹಳ್ಳಿ, ಕನಕಪುರ, ಬನ್ನೂರು, ಮಳವಳ್ಳಿ ಮಾರ್ಗವಾಗಿ ಮೈಸೂರಿಗೆ ತಲುಪುವುದು

ಮಾರ್ಗ ೨ – ಬೆಂಗಳೂರಿನಿಂದ ಕುಣಿಗಲ್‌, ಮದ್ದೂರು, ಮಂಡ್ಯ,ಶ್ರೀರಂಗಪಟ್ಟಣ  ಮಾರ್ಗವಾಗಿ ಮೈಸೂರಿಗೆ ತಲುಪುವುದು.

ಈ ಮಾರ್ಗಗಳನ್ನು ಉಪಯೋಗಿಸುವಂತೆ ಪೊಲೀಸ್‌ ಇಲಾಖೆ ಆದೇಶ ಹೊರಡಿಸಿದೆ.

ಇನ್ನೊಂದು ಕಡೆ ಕೋರ್ಟ್‌ ಆದೇಶದ ಮೇರೆಗೆ ಪಾದಯಾತ್ರೆ ಮೊಟಕುಗೊಳ್ಳುವ ಸಾಧ್ಯತೆ ಇದೆ ಎನ್ನಲಾಗ್ತಿದೆ.

 

Share Post