BengaluruPolitics

ಅನಿಲ್‌ ಮೆಣಸಿನಕಾಯಿ ಪರ ನಟಿ ಹರ್ಷಿಕಾ ಪೂಣಚ್ಚ ಪ್ರಚಾರ

ಗದಗ; ಚುನಾವಣಾ ಪ್ರಚಾರಕ್ಕೆ ಸಿನಿಮಾ ನಟ-ನಟಿಯರು ಧುಮುಕುತ್ತಿದ್ದಾರೆ. ಗದಗದಲ್ಲಿ ಇಂದು ನಟ ಭುವನ್‌ ಹಾಗೂ ನಟಿ ಹರ್ಷಿಕಾ ಪೂಣಚ್ಚ ಬಿಜೆಪಿ ಅಭ್ಯರ್ಥಿ ಅನಿಲ್‌ ಮೆಣಸಿನಕಾಯಿ ಪರ ಪ್ರಚಾರ ಮಾಡಿದರು. ಮನೆ ಮನೆಗೂ ತೆರಳಿ ಬಿಜೆಪಿಗೆ ಮತ ಹಾಕುವಂತೆ ಮತದಾರರಲ್ಲಿ ಮನವಿ ಮಾಡಿದರು.

ಅನಿಲ್‌ ಮೆಣಸಿನಕಾಯಿಯವರಿಗೆ ಗದಗದ ಅಭಿವೃದ್ಧಿ ಬಗ್ಗೆ ದೂರದೃಷ್ಟಿ ಇದೆ. ಆದ್ರೆ ಕಳೆದ ಬಾರಿ ಕಡಿಮೆ ಮತಗಳ ಅಂತರದಿಂದ ಸೋತಿದ್ದರು. ಆದ್ರೆ ಗೆದ್ದ ಕಾಂಗ್ರೆಸ್‌ ಶಾಸಕರು, ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ. ಮೂಲ ಸೌಕರ್ಯಗಳು ಒದಗಿಸಿಲ್ಲ. ಹೀಗಾಗಿ ಬಿಜೆಪಿ ಅಭ್ಯರ್ಥಿಗೆ ಮತ ನೀಡಿ ಎಂದು ನಟಿ ಹರ್ಷಿಕಾ ಪೂಣಚ್ಚ ಮತದಾರರಲ್ಲಿ ಮನವಿ ಮಾಡಿದ್ದಾರೆ.

 

Share Post