Crime

ಜವಳಿ ಕಾರ್ಖಾನೆಯಲ್ಲಿ ಬೆಂಕಿ ಅನಾಹುತ; ಕೋಟ್ಯಂತರ ನಷ್ಟ

ಮುಂಬೈ: ಇಲ್ಲಿನ ಭಿವಂಡಿ ಬಳಿಯ ಕಾಝಿ ಕಾಂಪೌಂಡ್‌ ನಲ್ಲಿರುವ ಜವಳಿ ಕಾರ್ಖಾನೆಯಲ್ಲಿ ಆಬರಿ ಬೆಂಕಿ ಅನಾಹುತ ಸಂಭವಿಸಿದೆ. ಮುಚ್ಚಿದ್ದ ಜವಳಿ ಕಾರ್ಖಾನೆಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಕೋಟ್ಯಂತರ ರೂಪಾಯಿ ನಷ್ಟವಾಗಿದೆ.

ಈ ಕಾಂಪೌಂಡ್‌ನಲ್ಲಿ ಹಲವಾರು ಜವಳಿ ಕಾರ್ಖಾನೆಗಳಿವೆ. ಅದ್ರಲ್ಲಿ ಬಹುತೇಕ ಕಾರ್ಖಾನೆಗಳನ್ನು ಹಲವಾರು ತಿಂಗಳುಗಳಿಂದ ಮುಚ್ಚಲಾಗಿತ್ತು. ಅದ್ರಲ್ಲಿ ಒಂದು ಕಾರ್ಖಾನೆಗೆ ಕಳೆದ ರಾತ್ರಿ ಬೆಂಕಿ ಬಿದ್ದಿದೆ.

ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದು, ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಆದ್ರೆ ಬೆಂಕಿ ದುರಂತಕ್ಕೆ ಕಾರಣ ಏನು ಎಂಬುದು ಮಾತ್ರ ಇನ್ನೂ ಗೊತ್ತಾಗಿಲ್ಲ.

Share Post