Districts

ಮೇಕೆದಾಟು ಪಾದಯಾತ್ರೆ – ಹೈಕೋರ್ಟ್‌ ಆದೇಶ ಪಾಲಿಸೋಕೆ ಸಿದ್ದ: ಸಿದ್ದರಾಮಯ್ಯ

ರಾಮನಗರ : ಮೇಕೆದಾಟು ಪಾದಯಾತ್ರೆ ಕುರಿತು ಇಂದು ಹೈಕೋರ್ಟ್‌ಗೆ ಪಿಐಎಲ್‌ ಸಲ್ಲಿಕೆ ಆಗಿತ್ತು. ತುರ್ತು ವಿಚಾರಣೆ ನಡೆಸಿದ ಹೈಕೋರ್ಟ್‌ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಪಾದಯಾತ್ರೆ ನಿಲ್ಲಿಸಲು ಸರ್ಕಾರಕ್ಕೆ ಆಗಲ್ವಾ ಎಂದು ಪ್ರಶ್ನಿಸಿದೆ. ಇದೇ ವಿಷಯವಾಗಿ ನ್ಯಾಯಾಲಯವು ಜನವರಿ ೧೪ಕ್ಕೆ ವಿಚಾರಣೆಯನ್ನು ಮುಂದೂಡಿದೆ.

ಇಂದು ಬೆಳಗ್ಗೆ ಪತ್ರಕರ್ತರೊಡನೆ ಮಾತನಾಡಿದ್ದ ಸಿದ್ದರಾಮಯ್ಯ ಕೋರ್ಟ್‌ ಆದೇಶ ಬರಲಿ ನೋಡೋಣ ಎಂದಿದ್ದರು. ಈಗ ಮತ್ತೊಮ್ಮೆ ಮಾತನಾಡಿ ಕೋರ್ಟ್‌ ಆದೇವನ್ನು ನಾವು ಪಾಲನೆ ಮಾಡಲು ಸಿದ್ದ ಎಂದು ಹೇಳಿಕೊಂಡಿದ್ದಾರೆ.

ಹೈ ಕೋರ್ಟ್‌ ನಿರ್ಧಾರವನ್ನು ನಾವು ಪಾಲಿಸುತ್ತೇವೆ. ಹಾಗೆಯೇ ಕಾನೂನು ರೀತಿ ಹೋರಾಟ ಮುಂದುವರೆಸುತ್ತೇವೆ. ಸದ್ಯಕ್ಕೆ ನಾವು ಪಾದಯಾತ್ರೆ ಮುಂದುವರೆಸಲಿದ್ದೇವೆ ಎಂದು ವಿಪಕ್ಷ ನಾಯಕ ಹೇಳಿದ್ದಾರೆ. ಕಾಂಗ್ರೆಸ್‌ ನಾಯಕರು ಮಧ್ಯಾಹ್ನ ಊಟದ ಸಮಯದಲ್ಲಿ ಪಿಐಎಲ್‌  ಬಗ್ಗೆ ಚರ್ಚೆ ನಡೆಸಿದ್ದಾರೆ.

Share Post