National

ಸಿಆರ್‌ಪಿಎಫ್‌ ಸಿಬ್ಬಂದಿ ನಡುವೆ ಗುಂಡಿನ ಕಾಳಗ

ತೆಲಂಗಾಣ: ಕ್ಷುಲ್ಲಕ ಕಾರಣಕ್ಕೆ ಸಿಆರ್‌ಪಿಎಫ್‌ ಸಿಬ್ಬಂದಿ ನಡುವೆ ಗುಂಡಿನ ಕಾಳಗ ನಡೆದಿರುವ ಘಟನೆ ಮುಗುಲು ಜಿಲ್ಲೆಯ ವೆಂಕಟಾಪುರಂನಲ್ಲಿ ನಡೆದಿದೆ. ಸಿಆರ್‌ಪಿಎಫ್‌ನಲ್ಲಿನ ಕೆಲಸ ಮಾಡ್ತಿದ್ದ ಎಸ್‌ಐ ಮತ್ತು ಹೆಡ್‌ ಕಾನ್ಸ್‌ಟೇಬಲ್‌ ನಡುವೆ ಗುಂಡಿನ ಕಾಳಗ ನಡೆದಿದೆ.

ಘಟನೆಯಲ್ಲಿ ಸಿಆರ್‌ಪಿಎಪ್‌ನ ಎಸ್‌ಐ ಉಮೇಶ್‌ ಚಂದ್ರಗೆ ಗನ್‌ನಿಂದ ಶೂಟ್‌ ಮಾಡಿದ್ದಾರೆ, ಬಳಿಕ ಹೆಡ್‌ ಕಾನ್ಸ್‌ಟೇಬಲ್‌ ಕೂಡ ಅದೇ ಗನ್‌ನಿಂದ ಶೂಟ್‌ ಮಾಡಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ದುರ್ಘಟನೆಯಲ್ಲಿ ಎಸ್‌ಐ ಉಮೇಶ್‌ ಚಂದ್ರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಹೆಡ್‌ ಕಾನ್ಸ್‌ಟೇಬಲ್‌ ಸ್ಟೀಫನ್‌ ಅವರನ್ನು ಆಸ್ಪತ್ರೆಗೆ ದಾಖಲಿಸಲಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ ತಿಳಿದುಬಂದಿಲ್ಲ.

Share Post