Districts

ಕರ್ತವ್ಯದ ಸಮಯದಲ್ಲೇ ಅಸುನೀಗಿದ KSRTC ಕಂಡಕ್ಟರ್‌

ಚಿಕ್ಕಮಗಳೂರು : ಕರ್ತವ್ಯ ನಿರತರಾಗಿದ್ದಗಲೇ ಹೃದಯಾಘಾತಕ್ಕೆ ಒಳಗಾಗಿ ವಿಜಯ್‌ ಕುಮಾರ್‌ (42) ಎಂಬುವವರು ಮೃತಪಟ್ಟಿದ್ದಾರೆ. ಬಸ್ಸಿನಲ್ಲಿ ಸಂಚರಿಸುವಾಗಲೇ ಈ ಘಟನೆ ಸಂಭವಿಸಿದೆ. ವಿಜಯ್‌ಕುಮಾರ್‌ ಅವರು ಸಖರಾಯಣಪಟ್ಟಣದ ಬಳಿ ಇರುವ ಕುನಾಳು ಗ್ರಾಮದವರಾಗಿದ್ದಾರೆ.

ಚಿಕ್ಕಮಗಳೂರಿನಿಂದ ಬೆಳಗ್ಗೆ ೬ ಗಂಟೆಗೆ ಬಸ್‌ ಹೊರಟಿತ್ತು. ಕೊಟ್ಟಿಗೆಹಾರ ಬಳಿ ಸಾಗುವಾಗ ವಿಜಯ್‌ಕುಮಾರ್‌ ಅವರು ಅಸ್ವಸ್ಥರಾಗಿದ್ದಾರೆ. ತಕ್ಷಣ ಚಾಲಕ ಮತ್ತು ನಿರೀಕ್ಷಕ ಬಣಕಲ್‌ ಅವರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿಂದ ಮುಡಿಗೆರೆ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ವಿಜಯ್‌ ಕುಮಾರ್‌ ಸಾವನ್ನಪ್ಪಿದ್ದಾರೆ.

Share Post