Cinema

ಹಿರಿಯ ನಿರ್ದೇಶಕ ಕೆ.ಎಸ್. ಸೇತುಮಾಧವನ್‌ ನಿಧನ

ತಿರುವನಂತಪುರಂ : ಖ್ಯಾತ ಚಿತ್ರ ನಿರ್ದೇಶಕ ಕೆ.ಎಸ್.ಸೇತುಮಾಧವನ್‌ (೯೦)ವಯೋಸಹಜ ಕಾರಣದಿಂದ ಶುಕ್ರವಾರ ಬೆಳಗ್ಗೆ ನಿಧನರಾದರು.

ರಾಷ್ಟ್ರ ಪ್ರಶಸ್ತಿ ವಿಜೇತರಾಗಿದ್ದ ಸೇತುಮಾಧವನ್‌ ತಮಿಳು, ತೆಲುಗು, ಹಿಂದಿ ಚಿತ್ರಗಳನ್ನು ನಿರ್ದೇಶಿಸಿದ್ದರು. ಕಮಲ್‌ ಹಾಸನ್‌ ಅವರನ್ನು ಬಾಲ ನಟನಾಗಿ ಚಿತ್ರರಂಗಕ್ಕೆ ಪರಿಚಯಿಸಿದ್ದೇ ಇವರು. ಬಳಿಕ ಕನ್ಯಾಕುಮಾರಿಯಲ್ಲಿ ಮುಖ್ಯ ಪಾತ್ರ ನೀಡಿದ್ದರು.

ಮಲೆಯಾಳಂ ಭಾಷೆಯ ಪ್ರಸಿದ್ದ ಕಾದಂಬರಿಗಳನ್ನು ಸಿನಿಮಾ ಮಾಡಿದ ಹೆಗ್ಗಳಿಕೆ ಇವರದು. ೧೯೩೧ರಲ್ಲಿ ಕೇರಳದ ಪಾಲಕ್ಕಾಡ್‌ನಲ್ಲಿ ಜನಿಸಿದ್ದ ಇವರು ರಾಮನಾಥ್‌ ಅವರ ಸಹಾಯಕ ನಿರ್ದೇಶಕರಾಗಿ ಚಿತ್ರರಂಗ ಪ್ರವೇಶಿಸಿದ್ದರು.

Share Post