Districts

ನೇಣು ಬಿಗಿದ ಸ್ಥಿತಿಯಲ್ಲಿ ಸ್ವಾಮೀಜಿ ಮೃತದೇಹ ಪತ್ತೆ..!

ರಾಮನಗರ: ಸ್ವಾಮೀಜಿಯೊಬ್ಬರು ಮಠದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮಾಗಡಿ ತಾಲ್ಲೂಕಿನ ಸೋಲೂರು ಹೋಬಳಿಯ ಚಿಲುಮೆ ಮಠದ ಬಸವಲಿಂಗ ಸ್ವಾಮೀಜಿ ಮೃತಪಟ್ಟವರು. ಭಕ್ತರ ಮನೆಯೊಂದರಲ್ಲಿ ಪೂಜೆ ಇದ್ದಿದ್ದರಿಂದ ಸ್ವಾಮೀಜಿ ಭಾನುವಾರ ಅವರ ಮನೆಗೆ ತೆರಳಿದ್ದರು. ಭಾನುವಾರ ತಡರಾತ್ರಿ ಸ್ವಾಮೀಜಿ ಮಠಕ್ಕೆ ಹಿಂತಿರುಗಿದ್ದರು. ಇಂದು ಬೆಳಗ್ಗೆ ಕೂಡಾ ಧನುರ್ಮಾಸ ಪೂಜೆ ಹಾಗೂ ಗದ್ದುಗೆ ಪೂಜೆಯನ್ನು ನೆರವೇರಿಸಿದ್ದರು. ಅನಂತರ ಸ್ವಾಮೀಜಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ.
ಮಠದ ಕಿಟಕಿಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಸ್ವಾಮೀಜಿಯವರ ಮೃತದೇಹ ಪತ್ತೆಯಾಗಿದೆ. ರಾಮನಗರ ಪೊಲೀಸ್‌ ವರಿಷ್ಠಾಧಿಕಾರಿ ಗಿರೀಶ್‌ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು. ಸ್ವತಃ ಸ್ವಾಮೀಜಿಯವರೇ ಆತ್ಮಹತ್ಯೆ ಮಾಡಿಕೊಂಡರಾ ಅಥವಾ ಯಾರಾದರೂ ಸಾಯಿಸಿ ನೇಣಿ ಹಾಕಿದ್ದಾರಾ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ.

Share Post