CrimeDistricts

ಮಫ್ತಿಯಲ್ಲಿದ್ದ ಪಿಎಸ್‌ಐ ಮೇಲೆ ಪಾನಮತ್ತ ಯುವಕರಿಂದ ಹಲ್ಲೆ!

ರಾಮನಗರ; ರಾತ್ರಿ ಮಫ್ತಿಯಲ್ಲಿ ಗಸ್ತು ತಿರುಗುತ್ತಿದ್ದ ಪಿಎಸ್‌ಐ ಮೇಲೆ ಕಂಠಪೂರ್ತಿ ಕುಡಿದಿದ್ದ ಯುವಕತು ಬಿಯರ್‌ ಬಾಟಲಿಯಿಂದ ಹಲ್ಲೆ ಮಾಡಿರುವ ಘಟನೆ ನಡೆದಿದೆ.. ರಾಮನಗರದ ರಾಯರದೊಡ್ಡಿಯಲ್ಲಿರುವ ಸುಪ್ರೀತ್‌ ವೈನ್ಸ್‌ ಬಳಿ ಈ ಘಟನೆ ನಡೆದಿದ್ದು, ಪಿಎಸ್‌ಐ ಭುಜಕ್ಕೆ ತೀವ್ರ ಗಾಯಗಳಾಗಿವೆ..
ಪಿಎಸ್‌ಐ ದುರಗಪ್ಪ ಎಂಬುವವರ ಮೇಲೆ ಮೂವರು ಯುವಕರು ಹಲ್ಲೆ ಮಾಡಿದ್ದಾರೆ.. ರಾಯರದೊಡ್ಡಿ ನಿವಾಸಿ ಕಿರಣ್ ಕುಮಾರ್‌, ಪಾದರಹಳ್ಳಿ ವಾಸಿ ಶ್ರೀಕಾಂತ ಹಾಗೂ ಚೇತನ್ ಅಲಿಯಾಸ್ ಕುಂತಿ ಎಂಬುವವರೇ ದಾಳಿ ಮಾಡಿದವರು.. ಈ ಮೂವರ ವಿರುದ್ಧ ಈ ಕೇಸ್‌ ದಾಖಲಿಸಲಾಗಿದೆ..
ಪ್ರಕರಣವೊಂದರ ತನಿಕೆಗಾಗಿ ಮಫ್ತಿಯಲ್ಲಿ ಪಿಎಸ್‌ಐ ದುರುಗಪ್ಪ ಹಾಗೂ ಪೇದೆಗಳಾದ ಚನ್ನಬಸಪ್ಪ, ಶಿವರಾಜ ಅವರೊಂದಿಗೆ ರಾಯರದೊಡ್ಡಿಗೆ ತೆರಳಿದ್ದರು.. ಈ ವೇಳೆ ಪಾನಮತ್ತರಾಗಿದ್ದ ಮೂವರು ಗಲಾಟೆ ಮಾಡಿದ್ದಾರೆ.. ದುರುಗಪ್ಪ ಅವರು ನಾನು ಪೊಲೀಸ್‌ ಅಧಿಕಾರಿ ಎಂದು ಹೇಳಿದ್ದರೂ ಮೂವರಲ್ಲಿ ಒಬ್ಬ ಬಿಯರ್‌ ಬಾಟಲಿಯಿಂದ ದಾಳಿ ಮಾಡಿದ್ದಾರೆ.. ನಂತರ ಉಳಿದವರೂ ಹಲ್ಲೆ ಮಾಡಿದ್ದಾರೆ..

Share Post