BengaluruCrime

ಕೆಂಗೇರಿ ಕೆರೆಗೆ ಬಿದ್ದ ಅಣ್ಣ-ತಂಗಿ; ಒಂದು ಮೃತದೇಹ ಪತ್ತೆ!

ಬೆಂಗಳೂರು; ಕೆಂಗೇರಿ ಕೆರೆಯಲ್ಲಿ ಅಣ್ಣ, ತಂಗಿ ಬಿದ್ದು ನಾಪತ್ತೆಯಾಗಿದ್ದು, ಇದರಲ್ಲಿ ಅಣ್ಣನ ಮೃತದೇಹ ಪತ್ತೆಯಾಗಿದೆ.. ಸತತ ಮೂರು ಗಂಟೆಗಳ ಕಾರ್ಯಾಚರಣೆ ಬಳಿಕ 13 ವರ್ಷದ ಶ್ರೀನಿವಾಸ್‌ ಮೃತದೇಹ ಪತ್ತೆಯಾಗಿದೆ.. ತಂಗಿ 11 ವರ್ಷದ ಲಕ್ಷ್ಮೀಗಾಗಿ ಹುಡುಕಾಟ ನಡೆಸಲಾಗುತ್ತಿದೆ..
ನಿನ್ನೆ ಸಂಜೆ ಕೆಂಗೇರಿ ಪಕ್ಕದ ಬಡಾವಣೆಯಲ್ಲಿ ವಾಸವಾಗಿರುವ ನಾಗಮ್ಮ ಎಂಬುವವರ ಮಕ್ಕಳಾದ ಶ್ರೀನಿವಾಸ್‌ ಮತ್ತು ಲಕ್ಷ್ಮೀ ಕೆಂಗೇರಿ ಕೆರೆಗೆ ನೀರು ತರಲು ಹೋಗಿದ್ದರು.. ಆದ್ರೆ ವಾಪಸ್‌ ಬಂದಿರಲಿಲ್ಲ.. ನೀರು ತರಲು ಹೋಗಿ ಕೆಂಗೇರಿ ಕರೆ ಬಳಿ ಆಟವಾಡುತ್ತಿದ್ದರು.. ಈ ವೇಳೆ ಕಾಲುಜಾರಿ ಕೆರೆಗೆ ಬಿದ್ದು ನಾಪತ್ತೆಯಾಗಿದ್ದರು.. ಕೆರೆ ದಂಡೆ ಮೇಲೆ ಮಕ್ಕಳ ಬಟ್ಟೆ ಹಾಗೂ ಬಿಂದಿಗೆ ಇತ್ತು.. ಹೀಗಾಗಿ ನೀರುಪಾಲಾಗಿರುವ ಶಂಕೆ ವ್ಯಕ್ತವಾಗಿತ್ತು..
ಹೀಗಾಗಿ ಇಂದು ಬೆಳಗ್ಗೆಯಿಂದ ಅಗ್ನಿಶಾಮಕ ಸಿಬ್ಬಂದಿ ಸತತವಾಗಿ ಕಾರ್ಯಾಚರಣೆ ನಡೆಸಿದ್ದರು.. ಶೋಧಕಾರ್ಯ ಮುಂದುವರೆಸಲಾಗಿದೆ.. ಮಕ್ಕಳ ತಾಯಿ ನಾಗಮ್ಮ ಬಿಬಿಎಂಪಿಯಲ್ಲಿ ಕಸ ವಿಂಗಡಣೆ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.. ಕೆರೆ ಬಳಿ ನಾಗಮ್ಮ ಅವರ ಆಕ್ರಂದನ ಮುಗಿಲು ಮುಟ್ಟಿದೆ..

Share Post