DistrictsPolitics

ಪ್ರಶ್ನೆ ಕೇಳಿದರೆ ಹೆದರುವುದಕ್ಕೆ ನಾನು ಮೋದಿಯಲ್ಲ; ಪ್ರಿಯಾಂಕ್‌ ಖರ್ಗೆ

ಕಲಬುರಗಿ; ಪ್ರಶ್ನೆ ಕೇಳಿದರೆ ಓ ಮೈ ಗಾಡ್‌ ಎಂದು ಹೆದರಿಕೊಳ್ಳುವುದಕ್ಕೆ ಹಾಗೂ ಹೋಗಿ ಅಡಗಿಕೊಳ್ಳುವುದಕ್ಕೆ ನಾನು ಮೋದಿಯಲ್ಲ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಲೇವಡಿ ಮಾಡಿದ್ದಾರೆ.. ಕಲಬುರಗಿಯಲ್ಲಿ ಮಾತನಾಡಿರುವ ಅವರು, ಪಂಚಾಯತ್ ರಾಜ್ ಇಲಾಖೆ‌ಯ ನೌಕರರ ಪ್ರತಿಭಟನೆಯ ವಿಷಯದಲ್ಲಿ ತಮ್ಮನ್ನು ಕೆಣಕಿದ ಬಿಜೆಪಿ ನಾಯಕರಿಗೆ ಉತ್ತರ ಕೊಟ್ಟಿದ್ದಾರೆ..
ಆರ್‌ಡಿಪಿಆರ್‌ ಇಲಾಖೆಯಲ್ಲಿ ಕೈಗೊಂಡಿರುವ ಸುಧಾರಣೆಗಳ ಪಟ್ಟಿಯನ್ನು ಪ್ರಿಯಾಂಕ್‌ ಖರ್ಗೆ ಬಿಡುಗಡೆ ಮಾಡಿದ್ದಾರೆ.. ಈ ಮೂಲಕ ಪ್ರಶ್ನೆ ಮಾಡುತ್ತಿದ್ದವರಿಗೆ ಉತ್ತರ ಕೊಟ್ಟಿದ್ದಾರೆ.. ಪಂಚಾಯತ್‌ ರಾಜ್‌ ಇಲಾಖೆ ನೌಕರರು ಮೂರು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.. ಈ ಹಿನ್ನೆಲೆಯಲ್ಲಿ ಟ್ವೀಟ್‌ ಮಾಡಿರುವ ಬಿಜೆಪಿ, ಎಲ್ಲಿ ಅಡಗಿದ್ದೀರಿ ಪ್ರಿಯಾಂಕ್‌, ಪಂಚಾಯತ್‌ ನೌಕರರ ಗೋಳು ಕೇಳೋರು ಯಾರು ಎಂದು ಪ್ರಶ್ನೆ ಮಾಡಿತ್ತು.. ಇದಕ್ಕೆ ಉತ್ತರವಾಗಿ ಮಾತನಾಡಿರುವ ಪ್ರಿಯಾಂಕ್‌ ಖರ್ಗೆ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಇಲಾಖೆಯಲ್ಲಿ ಸಾಕಷ್ಟು ಬದಲಾವಣೆ ತಂದಿದ್ದೇವೆ ಎಂದು ಹೇಳಿದ್ದಾರೆ..
ಪಂಚಾಯತ್‌ ನೌಕರರು ಹಾಗೂ ಸಿಬ್ಬಂದಿಯ ಬೇಡಿಕೆಗಳನ್ನು ಈಡೇರಿಸಲು ನಾವು ಮಾತುಕತೆ ಮಾಡುತ್ತಿದ್ದೇನೆ.. ಸಂಘಟನೆಗಳ ಜೊತೆಯಲ್ಲಿ ಚರ್ಚೆ ಮಾಡುತ್ತಿದ್ದೇನೆ.. ಬಿಜೆಪಿ ಸರ್ಕಾರದ ಅವಧಿಯಲ್ಲಿ ಆದ ಲೋಪಗಳನ್ನೇ ನಾವು ಇನ್ನೂ ಸರಿಪಡಿಸುತ್ತಿದ್ದೇವೆ.. ಗ್ರಾಮ ಪಂಚಾಯಿತಿ ನೌಕರರ 40 ಬೇಡಿಕೆಗಳಲ್ಲಿ ಹಲವನ್ನು ಈಗಾಗಲೇ ಈಡೇರಿಸಿದ್ದು, ಕೆಲವು ಬೇಡಿಕೆಗಳಿಗೆ ಕಾನೂನಿನಲ್ಲಿ ಅವಕಾಶವಿಲ್ಲ.. ಹೀಗಾಗಿ ಪರಿಶೀಲನೆ ಮಾಡುತ್ತಿದ್ದೇವೆ ಎಂದು ಪ್ರಿಯಾಂಕ್‌ ಖರ್ಗೆ ಹೇಳಿದರು..

Share Post