CrimeNational

ಹೆತ್ತ ತಾಯಿಯನ್ನೇ ಕೊಂದು ಕತ್ತರಿಸಿ ಬೇಯಿಸಿದ್ದ ಮಗ!; ಕೋರ್ಟ್‌ ಹೇಳಿದ್ದೇನು..?

ಮುಂಬೈ; ಹೆತ್ತ ತಾಯಿಯನನ್ನೇ ಕೊಂದು ಆಕೆಯ ದೇಹವನ್ನು ಪೀಸ್‌ ಪೀಸ್‌ ಮಾಡಿ ಮಗ ಅವುಗಳನ್ನು ಮಾಂಸ ಬೇಯಿಸಿದಂತೆ ಬೇಯಿಸಿದ್ದ.. 2017ರಲ್ಲಿ ನಡೆದಿದ್ದ ಈ ಪ್ರಕರಣ ಸಂಬಂಧ ನಿನ್ನೆ ಬಾಂಬೆ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆದಿದೆ.. ಇಂತಹ ವ್ಯಕ್ತಿಗೆ ಸುಧಾರಣೆಗೆ ಅವಕಾಶವೇ ಇಲ್ಲ, ಮರಣದಂಡನೆ ಸೂಕ್ತ ಎಂದು ಅಭಿಪ್ರಾಯಪಟ್ಟಿದೆ.. ಕೆಳ ನ್ಯಾಯಾಲಯ ಕೊಟ್ಟಿದ್ದ ಮರಣದಂಡನೆ ತೀರ್ಪನ್ನು ಎತ್ತಿಹಿಡಿದಿದೆ..
ಕುಚ್ಚೋರವಿ ಎಂಬಾತ ಎಂಬಾತ ತನ್ನ 63 ವರ್ಷದ ತಾಯಿ ಯಲ್ಲಮ್ಮ ಎಂಬಾಕೆಯನ್ನು ಕೊಚ್ಚಿ ಕೊಲೆ ಮಾಡಿದ್ದ.. ನಂತರ ಆಕೆಯ ದೇಹವನ್ನು ಪೀಸ್‌ ಪೀಸ್‌ ಮಾಡಿದ್ದ.. ದೊಡ್ಡ ಪಾತ್ರೆಯಲ್ಲಿ ಅವುಗಳನ್ನು ಹಾಕಿ ಮಾಂಸ ಬೇಯಿಸಿದಂತೆ ಬೇಯಿಸಿದ್ದ.. 2021ರಲ್ಲಿ ಕೊಲ್ಹಾಪುರ ಕೋರ್ಟ್‌ ಕುಚ್ಚೊರವಿ ಅಪರಾಧಿ ಎಂದು ಘೋಷಿಸಿ ಮರಣದಂಡನೆ ವಿಧಿಸಿತ್ತು.. ಇದನ್ನು ಪ್ರಶ್ನಿಸಿ ಬಾಂಬೆ ಹೈಕೋರ್ಟ್‌ ಮೊರೆ ಹೋಗಲಾಗಿತ್ತು.. ಆದ್ರೆ ಬಾಂಬೆ ಹೈಕೋರ್ಟ್‌ ಕೂಡಾ ಮರಣದಂಡನೆ ಶಿಕ್ಷೆಯನ್ನು ಎತ್ತಿ ಹಿಡಿದಿದೆ.. ಸದ್ಯ ಆರೋಪಿ ಯರವಾಡ ಜೈಲಿನಲ್ಲಿದ್ದಾನೆ..

Share Post