CrimeDistricts

ತುಮಕೂರು ಬಳಿ 1 ಕೋಟಿ ನಗದು, 350 ಕೆಜಿ ಬೆಳ್ಳಿ ದರೋಡೆ!

ತುಮಕೂರು; ತುಮಕೂರಿನ ಬಳಿ ಸಿನಿಮೀಯ ರೀತಿಯಲ್ಲಿ ದರೋಡೆ ನಡೆದಿದೆ.. ದೂರದಿಂದ ಫಾಲೋ ಮಾಡಿಕೊಂಡು ಬಂದ ಬಂದ ದುಷ್ಕರ್ಮಿಗಳು ಚಿನ್ನದ ವ್ಯಾಪಾರಿಯ ಕಾರನ್ನು ಅಡ್ಡಗಟ್ಟಿ ಒಂದು ಕೋಟಿ ರೂಪಾಯಿ ನಗದು ಹಾಗೂ 350 ಕೆಜಿಯಷ್ಟು ಬೆಳ್ಳಿಯನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.. ತುಮಕೂರಿನ ನೆಲಹಾಳ್‌ ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಈ ದರೋಡೆ ನಡೆದಿದೆ..
ತಮಿಳುನಾಡು ಮೂಲದ ಚಿನ್ನದ ವ್ಯಾಪಾರಿ ಅನಿಲ್‌ ಮಹದೇವ್‌ ಎಂಬುವವರು ಮಹಾರಾಷ್ಟ್ರದಲ್ಲಿ ಬೆಳ್ಳಿಗಟ್ಟಿ ಖರೀದಿ ಮಾಡಿದ್ದರು.. ಅಲ್ಲಿಂದ ಅವರು ಸೇಲಂಗೆ ಅದನ್ನು ಕಾರಿನಲ್ಲಿ ತೆಗೆದುಕೊಂಡು ಹೋಗುತ್ತಿದ್ದರು.. ಈ ಮಾಹಿತಿ ಅರಿತ ದರೋಡೆಕೋರರು ಅವರನ್ನು ಹಿಂದೆಯೇ ಫಾಲೋ ಮಾಡಿಕೊಂಡು ಬಂದಿದ್ದಾರೆ.. ತುಮಕೂರು ಬಳಿ ಕಾರನ್ನು ಅಡ್ಡಗಟ್ಟಿ ಮಾರಾಕಾಸ್ತ್ರಗಳನ್ನು ತೋರಿಸಿ ಬೆದರಿಸಿ, ಕಾರಿನಲ್ಲಿದ್ದ ಒಂದು ಕೋಟಿ ರೂಪಾಯಿ ನಗದು ಹಾಗೂ 350 ಕೆಜಿ ಬೆಳ್ಳಿ ಗಟ್ಟಿಯೊಂದರಿಗೆ ಎಸ್ಕೇಪ್‌ ಆಗಿದ್ದಾರೆ..
ಚಿನ್ನದ ವ್ಯಾಪಾರಿ ಅನಿಲ್‌ ಜೊತೆ ಅವರ ಮಗ ಬಾಲಾಜಿ, ಗೆಳೆಯರಾದ ಗಣೇಶ್‌, ವಿನೋದ್‌ ಕೂಡಾ ಕಾರಿನಲ್ಲಿದ್ದರು.. ಇನ್ನೋವಾ ಕಾರಿನಲ್ಲಿ ಇವರ ಕಾರು ಫಾಲೋ ಮಾಡುತ್ತಾ ಬಂದ ದರೋಡೆಕೋರರು ನೆಲಹಾಳ್‌ ಬಳಿ ಅಡ್ಡಗಟ್ಟಿದ್ದಾರೆ.. ಈ ವೇಳೆ ಅನಿಲ್‌ ಮಗ ಬಾಲಾಜಿ, ಗಣೇಶ್‌, ವಿನೋದ್‌ ತಪ್ಪಿಸಿಕೊಂಡು ಓಡಿದ್ದಾರೆ.. ಅನಿಲ್‌ ಅವರನ್ನು ಅಪಹರಿಸಿಕೊಂಡು ಹೋದ ದುಷ್ಕರ್ಮಿಗಳು ಅಜ್ಜೇನಹಳ್ಳಿ ಬಳಿ ಬಿಟ್ಟು ಪರಾರಿಯಾಗಿದ್ದಾರೆ.. ಈ ಬಗ್ಗೆ ಕೋರಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ..

Share Post