BengaluruCrime

ಮಹಾಲಕ್ಷ್ಮೀಯನ್ನು ಮೂವರು ಸೇರಿ ಕೊಂದರೇ..?; ಆ ಬೆರಳಚ್ಚುಗಳು ಯಾರವು..?

ಬೆಂಗಳೂರು; ವೈಯಾಲಿಕಾವಲ್‌ನ ಮನೆಯಲ್ಲಿ ಮಹಾಲಕ್ಷ್ಮೀ ಕೊಲೆ ಪ್ರಕರಣ ಸಾಕಷ್ಟು ಕುತೂಹಲ ಕೆರಳಿಸುತ್ತಿದೆ.. ಯಾರೋ ಒಬ್ಬ ವ್ಯಕ್ತಿ ಮಹಾಲಕ್ಷ್ಮೀಯನ್ನು ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿತ್ತು.. ಆದ್ರೆ ಕೊಲೆಯಾದ ಮಹಾಲಕ್ಷ್ಮೀಯವರ ಮನೆಯ ಗೋಡೆ ಮೇಲೆ ಮೂವರ ಬೆರಳಚ್ಚುಗಳು ಸಿಕ್ಕಿವೆ.. ಹೀಗಾಗಿ ಈ ಕೊಲೆಯಲ್ಲಿ ಮೂವರು ವ್ಯಕ್ತಿಗಳು ಭಾಗಿಯಾಗಿದ್ದಾರೆಯೇ ಎಂಬ ಅನುಮಾನ ಮೂಡಿದೆ..
ನೇಪಾಳ ಮೂಲದ ಮಹಾಲಕ್ಷ್ಮೀಯನ್ನು ಕೊಲೆ ಮಾಡಿ 59 ತುಂಡುಗಳನ್ನು ಮಾಡಿ ಫ್ರಿಡ್ಜ್‌ನಲ್ಲಿ ಇಡಲಾಗಿತ್ತು.. ಮಹಾಲಕ್ಷ್ಮೀ ಕೆಲಸ ಮಾಡುತ್ತಿದ್ದ ಮಳಿಗೆಯ ಮ್ಯಾನೇಜರ್‌ ಈ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ.. ಆತ ಸದ್ಯ ನಾಪತ್ತೆಯಾಗಿದ್ದು, ಆತನ ಮೊಬೈಲ್‌ ಲೊಕೇಶನ್‌ ಪಶ್ಚಮ ಬಂಗಾಳದಲ್ಲಿ ಕೊನೆಯ ಬಾರಿ ಪತ್ತೆಯಾಗಿದೆ.. ಅನಂತರ ಆತ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿಕೊಂಡಿದ್ದಾನೆ. ಈ ನಡುವೆಯೇ ಮಹಾಲಕ್ಷ್ಮೀಯವರ ಮನೆಯಲ್ಲಿ ಮೂವರ ಫಿಂಗರ್‌ ಪ್ರಿಂಟ್‌ ಪತ್ತೆಯಾಗಿದೆ.. ಹೀಗಾಗಿ ಪೊಲೀಸರು ಈ ಕೊಲೆಯಲ್ಲಿ ಒಂದಕ್ಕಿಂತ ಹೆಚ್ಚು ಮಂದಿ ಭಾಗಿಯಾಗಿರಬಹುದು ಎಂದು ಶಂಕಿಸಲಾಗುತ್ತಿದೆ..
ಇನ್ನು ವಿಶಪ್ರಾಶಣ ಮಾಡಿ ಮಹಾಲಕ್ಷ್ಮೀಯನ್ನು ಕೊಲೆ ಮಾಡಿರಬಹುದು.. ಅನಂತರ ದೇಹವನ್ನು ಪೀಸ್‌ ಪೀಸ್‌ ಮಾಡಿರಬಹುದು ಎಂದು ಶಂಕಿಸಲಾಗಿದೆ.. ಮಹಾಲಕ್ಷ್ಮಿ ದೇಹದ ಹೊಟ್ಟೆ ಹಾಗೂ ಕರುಳಿನ ಭಾಗವನ್ನು ಎಫ್.ಎಸ್.ಎಲ್ ಗೆ ಕಳುಹಿಸಲಾಗಿದೆ. ಎಪ್‌ಎಸ್‌ಎಲ್‌ ವರದಿ ಬಂದ ನಂತರ ಹೇಗೆ ಕೊಲೆಯಾಯಿತು ಅನ್ನೋದು ಗೊತ್ತಾಗಲಿದೆ..

Share Post