CrimeDistricts

ನಾಗಮಂಗಲ ಗಲಭೆ ಪ್ರಕರಣ; ತಲೆಮರೆಸಿಕೊಂಡಿದ್ದ ಯುವಕ ಸಾವು!

ಮಂಡ್ಯ; ಗಣೇಶ ಮೆರವಣಿಗೆ ವೇಳೆ ನಾಗಮಂಗದಲ್ಲಿ ನಡೆದ ಕೋಮು ಗಲಭೆ ಪ್ರಕರಣದಲ್ಲಿ ಬಂಧನದ ಭೀತಿಯಿಂದ ಊರು ಬಿಟ್ಟಿದ್ದ ಯುವಕನೊಬ್ಬ ಸಾವನ್ನಪ್ಪಿದ್ದಾನೆ.. ಕಿರಣ್‌ ಎಂಬಾತನೇ ಸಾವನ್ನಪ್ಪಿರುವ ಯುವಕನಾಗಿದ್ದು, ಇಂದು ಕಿರಣ್‌ ಅಂತ್ಯಕ್ರಿಯೆ ನಡೆಯಲಿದೆ..
ಇನ್ನು ಇದೇ ಪ್ರಕರಣದಲ್ಲಿ ಕಿರಣ್‌ ತಂದೆ ಬಂಧಿತರಾಗಿದ್ದು ಜೈಲು ಸೇರಿದ್ದಾರೆ.. ಕಿರಣ್‌ ಸಾವಿನ ಹಿನ್ನೆಲೆಯಲ್ಲಿ ಕೋರ್ಟ್‌ ಅನುಮತಿ ಪಡೆದು ಕಿರಣ್‌ ತಂದೆ ಕುಮಾರ್‌ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ.. ಕೋಮು ಗಲಭೆ ಪ್ರಕರಣದಲ್ಲಿ ಕಿರಣ್‌ ತಂದೆ ಕುಮಾರ್‌ 17ನೇ ಆರೋಪಿ ಎಂದು ತಿಳಿದುಬಂದಿದೆ.. ಗಣೇಶೋತ್ಸ ನೇತೃತ್ವವನ್ನು ಮೃತ ಕಿರಣ್‌ ವಹಿಸಿದ್ದರು.. ಆದ್ರೆ, ಮೆರವಣಿಗೆ ವೇಳೆ ಗಲಭೆ ನಡೆದಿದ್ದರಿಂದ ಕಿರಣ್‌ ವಿರುದ್ಧವೂ ಕೇಸ್‌ ದಾಖಲಾಗಿತ್ತು.. ಹೀಗಾಗಿ ಕಿರಣ್‌ ಬಂಧನದ ಭೀತಿಯಿಂದ ಊರು ಬಿಟ್ಟಿದ್ದ.
ಇನ್ನು ಬಂಧನದ ಭೀತಿಯಿಂದ 25ಕ್ಕೂ ಹೆಚ್ಚು ಯುವಕರು ತಲೆಮರೆಸಿಕೊಂಡಿದ್ದಾರೆ.. ಈಗ ಸ್ನೇಹಿತ ಕಿರಣ್‌ ಸಾವನ್ನಪ್ಪಿದ್ದು, ಆತನ ಅಂತಿಮ ದರ್ಶನಕ್ಕೆ ಬರುವುದಕ್ಕೂ ಯುವಕರು ಹೆದರುತ್ತಿದ್ದಾರೆ ಎಂದು ತಿಳಿದುಬಂದಿದೆ..

 

Share Post