CrimeDistricts

ಜಮೀನಿಗೆ ಹೋಗಿದ್ದ ದಂಪತಿಯ ಕತ್ತುಸೀಳಿ ಕೊಲೆ; ಅಳಿಯನ ಕೈವಾಡ..?

ಚಿತ್ರದುರ್ಗ; ಆ ದಂಪತಿ ತಮ್ಮ ಜಮೀನಿನಲ್ಲಿ ಈರುಳ್ಳಿ ಬೆಳೆ ಹಾಕಿದ್ದರು.. ಅದನ್ನು ನೋಡಿಕೊಂಡು ಬರಲೆಂದು ಹೋಗಿದ್ದರು.. ಆದ್ರೆ ವಾಪಸ್‌ ಬರಲೇ ಇಲ್ಲ.. ಅಲ್ಲೇ ಬರ್ಬರವಾಗಿ ಕೊಲೆಯಾಗಿ ಹೋಗಿದ್ದರು.. ಇಬ್ಬರನ್ನೂ ಕತ್ತು ಸೀಳಿ ಭೀಕರವಾಗಿ ಕೊಲೆ ಮಾಡಲಾಗಿತ್ತು.. ಚಿತ್ರದುರ್ಗ ಜಿಲ್ಲೆ ಬೊಮ್ಮಕ್ಕನಹಳ್ಳಿ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ..
46 ವರ್ಷದ ಹನುಮಂತಪ್ಪ ಹಾಗೂ ಅವರ ಪತ್ನಿ 42 ವರ್ಷ ತಿಪ್ಪಮ್ಮ ಕೊಲೆಯಾದವರು.. ಅಳಿಯ ಮಂಜುನಾಥನೇ ಈ ಕೊಲೆ ಮಾಡಿರಬಹುದು ಎಂದು ಶಂಕೆ ವ್ಯಕ್ತವಾಗಿದೆ.. ಮೃತರ ಮಗಳು ಹರ್ಷತಾ ಈ ಬಗ್ಗೆ ತುರುವನೂರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾಳೆ.. ಪತಿ ಮಂಜುನಾಥ್‌ ಹಾಗೂ ಅವರ ಕುಟುಂಬಸ್ಥರೇ ಈ ಕೊಲೆ ಮಾಡಿದ್ದಾರೆ ಎಂದು ಹರ್ಷಿತಾ ಆರೋಪ ಮಾಡಿದ್ದಾಳೆ..
ವರ್ಷದ ಹಿಂದೆಯಷ್ಟೇ ಹರ್ಷಿತಾ ಹಾಗೂ ಮಂಜುನಾತ್‌ ಮದುವೆಯಾಗಿತ್ತು.. ಆದ್ರೆ ಮಂಜುನಾಥ್‌ ನಿತ್ಯವೂ ಪತ್ನಿಗೆ ಕಿರುಕುಳ ನೀಡುತ್ತಿದ್ದನಂತೆ.. ಅವರ ಮನೆಯವರು ಕೂಡಾ ಆಗಾಗ ನನ್ನ ವಿರುದ್ಧ ಗಲಾಟೆ ಮಾಡುತ್ತಿದ್ದರು.. ಗಂಡನಂತೂ ಪ್ರತಿನಿತ್ಯ ಕುಡಿದುಬಂದು ಗಲಾಟೆ ಮಾಡುತ್ತಿದ್ದ.. ಹೀಗಾಗಿ ಒಂದು ತಿಂಗಳ ಹಿಂದೆ ನಾನು ತವರು ಮನೆ ಸೇರಿದ್ದೆ ಎಂದು ಹರ್ಷಿತಾ ಹೇಳಿಕೊಂಡಿದ್ದಾಳೆ..
ಹರ್ಷಿತಾ ತವರು ಸೇರಿದ್ದರಿಂದ ಕೋಪಗೊಂಡಿದ್ದ ಪತಿ ಮಂಜುನಾಥ್‌, ಹರ್ಷಿತಾ ತಂದೆ ಹನುಮಂತಪ್ಪ ಹಾಗೂ ತಾಯಿ ತಿಪ್ಪಮ್ಮಳನ್ನು ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.. ಪತಿ ಮಂಜುನಾಥ್, ಸಹೋದರ ರಘು, ಸಂಬಂಧಿ ಮಲ್ಲಿಕಾರ್ಜುನ, ಮಂಜುನಾಥನ ತಂದೆ ಚಂದ್ರಪ್ಪ ವಿರುದ್ಧ ಕೇಸ್ ದಾಖಲಿಸಿದ್ದಾರೆ.

Share Post