DistrictsHealth

ವಿಷವಿಲ್ಲದ ಹಾವೆಂದು ತಪ್ಪು ತಿಳಿದ ವ್ಯಕ್ತಿ ಸಾವು!

ಮಂಗಳೂರು; ಕನ್ನಡಿ ಹಾವು ಕಚ್ಚಿದರೂ ವಿಷ ಇರೋದಿಲ್ಲ ಎಂದು ಭಾವಿಸಿದ್ದ ವ್ಯಕ್ತಿಯೊಬ್ಬರು ಹಾವು ಕಚ್ಚಿದ್ದರಿಂದ ಸಾವನ್ನಪ್ಪಿದ್ದಾರೆ.. ಮಂಗಳೂರು ಹೊರವಲಯದಲ್ಲಿರುವ ಬಜ್ಪೆ ಎಂಬಲ್ಲಿ ಈ ದುರ್ಘಟನೆ ನಡೆದಿದೆ.. ಇಲ್ಲಿನ 55 ವರ್ಷದ ರಾಮಚಂದ್ರ ಪೂಜಾರಿ ಎಂಬುವವರೇ ಸಾವನ್ನಪ್ಪಿದ ವ್ಯಕ್ತಿಯಾಗಿದ್ದಾರೆ..
ಬಜ್ಪೆಯ ಮನೆಯೊಂದರ ಆವರಣದಲ್ಲಿ ಹಾವೊಂದು ಕಾಣಿಸಿಕೊಂಡಿದೆ.. ಇದು ವಿಷರಹಿತ ಹಾವು ಎಂದೇ ರಾಮಚಂದ್ರ ಪೂಜಾರಿ ಭಾವಿಸಿದ್ದಾರೆ.. ಹೀಗಾಗಿ ಅದನ್ನು ಹಿಡಿದು ಕೈಯಲ್ಲಿ ಆಟ ಆಡಿಸಲು ಶುರು ಮಾಡಿದ್ದಾರೆ.. ಈ ವೇಳೆ ಹಾವು ಹಾವು ಕೈಗೆ ಕಚ್ಚಿದೆ.. ಆದರೂ ಕೂಡಾ ಇದು ವಿಷಯ ರಹಿತ ಹಾವು ಅಂತ ರಾಮಚಂದ್ರ ಪೂಜಾರಿ ಅವರು ಅಷ್ಟು ಗಂಭೀರವಾಗಿ ತೆಗೆದುಕೊಂಡಿಲ್ಲ..
ಹಾವು ಕಚ್ಚಿದ್ದರೂ ವಿಷರಹಿತ ಹಾವು ಎಂದು ಆಸ್ಪತ್ರೆಗೂ ಹೋಗದೇ ಮನೆಯಲ್ಲೇ ಇದ್ದರು.. ಆದ್ರೆ ಗುರುವಾರ ಸಂಜೆ ಅವರಿಗೆ ತಲೆ ತಿರುಗಲು ಶುರುವಾಗಿದೆ.. ಇದ್ದಕ್ಕಿದ್ದಂತೆ ಅವರ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದೆ.. ಕೂಡಲೇ ಮನೆಯವರು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ರಾಮಚಂದ್ರ ಪೂಜಾರಿ ಸಾವನ್ನಪ್ಪಿದ್ದಾರೆ..

Share Post