CrimeDistricts

ಮೇಕೆದಾಟು ಬಳಿ ಐವರು ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ನೀರುಪಾಲು!

ರಾಮನಗರ; ಪಿಕ್‌ನಿಕ್‌ ತೆರಳಿದ್ದ ಐವರು ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಮೇಕೆದಾಟು ಬಳಿ ಕಾವೇರಿ ನದಿ ಪಾಲಾಗಿದ್ದಾರೆ.. ಕನಕಪುರ ತಾಲ್ಲೂಕಿನ ಮೇಕೆದಾಟು ಬಳಿಯ ಸಂಗಮದಲ್ಲಿ ಈ ದುರಂತ ನಡೆದಿದೆ..

ಮೃತರೆಲ್ಲರೂ ಬೆಂಗಳೂರು ಮೂಲದವರು ಎಂದು ತಿಳಿದುಬಂದಿದೆ.. ಹರ್ಷಿತ, ಅಭಿಷೇಕ್, ತೇಜಸ್, ವರ್ಷ ಹಾಗೂ ಸ್ನೇಹಾ ಮೃತ ದುರ್ದೈವಿಗಳು.. ಐವರೂ ವಿದ್ಯಾರ್ಥಿಗಳು ಸಂಗಮದಲ್ಲಿ ನೀರಿನಲ್ಲಿ ಆಟ ಆಡುತ್ತಿದ್ದರು.. ಈ ವೇಳೆ ನೀರಿನ ಸುಳಿಯಲ್ಲಿ ಸಿಲುಕಿ ಐವರೂ ಸಾವನ್ನಪ್ಪಿದ್ದಾರೆ..

ಮೃತರು ಬೆಂಗಳೂರಿನ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಓದುತ್ತಿದ್ದರು.. ಪಿಕ್‌ನಿಕ್‌ಗೆಂದು ಮೇಕದಾಟುವಿಗೆ ಹೋಗಿದ್ದರು.. ಮುಳುಗು ತಜ್ಞರು ಮೃತರ ದೇಹಗಳನ್ನು ಹೊರತೆಗೆದಿದ್ದಾರೆ..

 

Share Post