BengaluruCrime

ಗುತ್ತಿಗೆದಾರನಿಗೆ ಅವಾಚ್ಯ ಶಬ್ದಗಳಿಂದ ನಿಂದನೆ; ಶಾಸಕ ಮುನಿರತ್ನರದ್ದಾ ಆಡಿಯೋ..?

ಬೆಂಗಳೂರು; ಬಿಬಿಎಂಪಿ ಗುತ್ತಿಗೆದಾರ ಚಲುವರಾಜು ಅವರಿಗೆ ಆರ್‌ಆರ್‌ ನಗರ ಬಿಜೆಪಿ ಶಾಸಕ ಮುನಿರತ್ನ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.. ಈ ಬಗ್ಗೆ ಸ್ವತಃ ಚಲುವರಾಜು ಅವರೇ ಆಡಿಯೋ ಒಂದನ್ನು ಬಿಡುಗಡೆ ಮಾಡಿ ಶಾಸಕರ ವಿರುದ್ಧ ಆರೋಪ ಮಾಡಿದ್ದಾರೆ.. ಈ ಬಗ್ಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದಗೆ ದೂರು ಕೂಡಾ ನೀಡಿದ್ದಾರೆ.
ಘನ ತ್ಯಾಝ್ಯ ನಿರ್ವಹಣೆ ಹಾಗೂ ವಿಲೇವಾರಿಗೆ ವಾರ್ಡ್‌ 42ರ ಗುತ್ತಿಗೆಯನ್ನು ಚಲುವರಾಜು ಪಡೆದಿದ್ದು, ಇದಕ್ಕೆ ಶಾಸಕ ಮುನಿರತ್ನ 20 ಲಕ್ಷ ರೂಪಾಯಿ ಹಣ ಕೇಳಿದ್ದರಂತೆ.. ಆ ಹಣ ಕೊಡದಿದ್ದಕ್ಕೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ.. ಕೊಲೆ ಬೆದರಿಕೆ ಹಾಗೂ ಜಾತಿನಿಂದನೆ ಮಾಡಿದ್ದಾರೆ ಎಂದು ಚಲುವರಾಜು ಆರೋಪ ಮಾಡಿದ್ದಾರೆ.. ರೇಣುಕಾಸ್ವಾಮಿಗೆ ಗತಿ ಕಅಣಿಸಿದ್ದು ನಮ್ಮ ಅಕ್ಕನ ಮಗ, ನಿನಗೂ ಅದೇ ಗತಿ ಆಗುತ್ತೆ ಎಂದು ಬೆದರಿಸಿದ್ದಾರೆ ಎಂದು ಆರೋಪ ಮಾಡಲಾಗಿದೆ..

Share Post