CrimeDistricts

ಬುದ್ಧಿ ಹೇಳಿದ್ದಕ್ಕೆ ಹಿರಿಯ ಅಧಿಕಾರಿಗೆ ಚಾಕು ಹಾಕಿದ ನೌಕರ!

ಚಿಕ್ಕಮಗಳೂರು; ವರ್ಗಾವಣೆ ವಿಚಾರವಾಗಿ ಮನೆಯವರನ್ನು ಕರೆಸಿ ಬುದ್ಧಿ ಹೇಳಿದ್ದಕ್ಕೆ ನೌಕರನೊಬ್ಬ ತನ್ನ ಹಿರಿಯ ಅಧಿಕಾರಿಗೆ ಚಾಕುವಿನಿಂದ ದಾಳಿ ಮಾಡಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.. ಸಾರಿಗೆ ಇಲಾಖೆಯಲ್ಲಿ ಜೂನಿಯರ್‌ ಅಸಿಸ್ಟೆಂಟ್‌ ಆಗಿ ಕೆಲಸ ಮಾಡುವ ರಿತೇಶ್‌ ಎಂಬಾತನೇ ದಾಳಿ ಮಾಡಿರುವ ವ್ಯಕ್ತಿಯಾಗಿದ್ದಾನೆ.. ಕೆಎಸ್‌ಆರ್‌ಟಿಸಿ ಸಹಾಯಕ ವಿಭಾಗೀಯ ನಿಯಂತ್ರಣಾಧಿಕಾರಿ ಜಗದೀಶ್‌ ಕುಮಾರ್‌ ಎಂಬುವವರೇ ಹಲ್ಲೆಗೊಳಗಾದವರು.
ಜಗದೀಶ್‌ ಕುಮಾರ್‌ ಅವರು ವಾಹನ ಹತ್ತುವಾಗ ಬಂದ ರಿತೇಶ್‌ ಏಕಾಏಕಿ ಚಾಕುವಿನಿಂದ ದಾಳಿ ಮಾಡಿದ್ದಾರೆ.. ಈ ವೇಳೆ ಜಗದೀಶ್‌ ಕುಮಾರ್‌ ಕೈಗೆ ಗಾಯವಾಗಿದೆ.. ತಪ್ಪಿಸಿಕೊಳ್ಳುವಾಗ ಈ ಗಾಯವಾಗಿದೆ.. ಅವರು ನೋಡದೇ ಇದ್ದಿದ್ದರೆ ಅನಾಹುತ ನಡೆಯುತ್ತಿತ್ತು.. ರಿತೇಶ್‌ ಸರಿಯಾಗಿ ಕೆಲಸಕ್ಕೆ ಬರುತ್ತಿರಲಿಲ್ಲ. ಹೀಗಾಗಿ ಆತನನ್ನು ಬೇಲೂರಿಗೆ ವರ್ಗಾವಣೆ ಮಾಡಲಾಗಿತ್ತು.. ಇದೇ ವೇಳೆ ಜಗದೀಶ್‌ ಕುಮಾರ್‌ ಅವರು ರಿತೇಶ್‌ ಕುಟುಂಬದವರನ್ನು ಕರೆಸಿ ಕೌನ್ಸೆಲಿಂಗ್‌ ನೀಡಿದ್ದರು.. ಇದರಿಂದ ಅವಮಾನ ಆಗಿದೆ ಎಂದು ರಿತೇಶ್‌ ಈ ಕೆಲಸ ಮಾಡಿದ್ದಾನೆ..
ಸದ್ಯ ಆರೋಪಿ ಪರಾರಿಯಾಗಿದ್ದಾನೆ.. ಈ ಬಗ್ಗೆ ಚಿಕ್ಕಮಗಳೂರು ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ..

Share Post