BengaluruCrime

ರೇಣುಕಾಸ್ವಾಮಿ ಮೃತದೇಹ ಸಿಕ್ಕ ಸ್ಥಳದ ಬಳಿ ವೃದ್ಧೆಯ ದೇಹ ಪತ್ತೆ!

ಬೆಂಗಳೂರು; ರೇಣುಕಾಸ್ವಾಮಿ ಮೃತದೇಹ ಬಿಸಾಕಿದ್ದ ಸ್ಥಳ ಬಳಿಯೇ ವೃದ್ಧೆಯೊಬ್ಬಳ ಶವ ಮತ್ತೆಯಾಗಿದೆ.. ಸುಮನಹಳ್ಳಿಯ ಮೋರಿ ಬಳಿ ಚಿತ್ರದುರ್ಗದ ರೇಣುಕಾಸ್ವಾಮಿಯ ಮೃತದೇಹವನ್ನು ಬಿಸಾಡಲಾಗಿತ್ತು.. ಆ ಸ್ಥಳದ ಹತ್ತಿರವೇ ಈಗ ವೃದ್ಧೆಯ ದೇಹ ಸಿಕ್ಕಿದೆ.. ಕಾಮಾಕ್ಷಿಪಾಳ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ..
ಸ್ಥಳೀಯರು ವೃದ್ಧೆಯ ಮೃತದೇಹ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು.. ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದ್ದು, ವೃದ್ಧೆಯ ಗುರುತು ಪತ್ತೆಯಾಗಿಲ್ಲ.. ವೃದ್ಧೆ ಆಯತಪ್ಪಿ ಮೋರಿಗೆ ಬಿದ್ದು ಸಾವನ್ನಪ್ಪಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.. ಆದ್ರೆ, ಹಾಗೇನಾದರೂ ಆಗಿದ್ದರೆ ವೃದ್ಧೆ ಸ್ಥಳೀಯರೇ ಆಗಿರಬೇಕಿತ್ತು.. ಆದ್ರೆ ಸ್ಥಳೀಯರು ಯಾರೂ ಆಕೆಯನ್ನು ಗುರುತಿಸಿಲ್ಲ.. ಹೀಗಾಗಿ ವೃದ್ಧೆಯನ್ನು ಕೊಲೆ ಮಾಡಿ ಇಲ್ಲಿಗೆ ತಂದು ಹಾಕಿರಬಹುದು ಎಂಬ ಅನುಮಾನ ಸ್ಥಳೀಯರದ್ದು.

Share Post