CrimeNational

ಊಟ ಇಲ್ಲ ಎಂದಿದ್ದಕ್ಕೆ ಹೋಟೆಲ್‌ಗೆ ಲಾರಿ ನುಗ್ಗಿಸಿದ ಚಾಲಕ!

ಮುಂಬೈ; ಊಟ ನೀಡಲು ಹೋಟೆಲ್‌ ಮಾಲೀಕ ನಿರಾಕರಿಸಿದ್ದಕ್ಕೆ ಚಾಲಕನೊಬ್ಬ ಲಾರಿಯನ್ನು ಹೋಟೆಲ್‌ಗೆ ನುಗ್ಗಿಸಿ ರಾದ್ಧಾಂತ ಮಾಡಿರುವ ಘಟನೆ ನಡೆದಿದೆ.. ಮಹಾರಾಷ್ಟ್ರದ ಪುಣೆ-ಸೋಲಾಪುರ ಮಾರ್ಗಮಧ್ಯೆ ಈ ಘಟನೆ ನಡೆದಿದ್ದು, ಹೋಟೆಲ್‌ಗೆ ಸಾಕಷ್ಟು ಹಾನಿಯಾಗಿದೆ..
ಸೋಲಾಪುರದಿಂದ ಪುಣೆಗೆ ಬರುತ್ತಿದ್ದ ಲಾರಿಯೊಂದು ಹೋಟೆಲ್‌ ಒಂದರ ಬಳಿ ನಿಂತಿದೆ.. ಲಾರಿ ಚಾಲಕ ಊಟ ಕೇಳಿದ್ದಾನೆ.. ಆದ್ರೆ ಹೋಟೆಲ್‌ ಮಾಲೀಕ ಊಟ ಇಲ್ಲ ಎಂದು ಹೇಳಿದ್ದಾನೆ.. ಈಗಾಗಲೇ ಕಂಠಪೂರ್ತಿ ಕುಡಿದಿದ್ದ ಲಾರಿ ಚಾಲಕ ಊಟ ಇಲ್ಲ ಎನ್ನುತ್ತಲೇ ಆಕ್ರೋಶಗೊಂಡಿದ್ದಾನೆ.. ಕುಡಿದು ಅಮಲಿನಲ್ಲಿ ಲಾರಿ ಏರಿ ಲಾರಿಯನ್ನು ನೇರವಾಗಿ ಹೋಟೆಲ್‌ಗೆ ನುಗ್ಗಿಸಿದ್ದಾನೆ..
ಲಾರಿ ಹೋಟೆಲ್‌ಗೆ ನುಗ್ಗುತ್ತಿದ್ದಂತೆ ಅಲ್ಲಿದ್ದವರು ಲಾರಿ ಮೇಲೆ ಕಲ್ಲಿನಿಂದ ದಾಳಿ ಮಾಡಿದ್ದಾರೆ.. ಆದ್ರೆ ಲಾರಿ ಚಾಲಕ ಛಲಬಿಡದೇ ಹೋಟೆಲ್‌ಗೆ ಲಾರಿಯನ್ನು ನುಗ್ಗಿಸಿಯೇ ಬಿಟ್ಟಿದ್ದಾನೆ.. ಇದರಿಂದ ಹೋಟೆಲ್‌ಗೆ ಹಾನಿಯಾಗಿದ್ದು, ಹೋಟೆಲ್‌ ಮುಂದೆ ನಿಲ್ಲಿಸಿದ್ದ ಕಾರೊಂದಕ್ಕೂ ಹಾನಿಯಾಗಿದೆ..

Share Post