DistrictsPolitics

ಮುಂದಿನ ವರ್ಷವೇ ಚುನಾವಣೆ ಬರಬಹುದು ಸಿದ್ಧರಾಗಿ; ಹೆಚ್ಡಿಕೆ ಕರೆ

ಶಿವಮೊಗ್ಗ; ಯಾವ ಸಮಯದಲ್ಲಾದರೂ ವಿಧಾನಸಭಾ ಚುನಾವಣೆ ಬರಬಹುದು. ಮುಂದಿನ ವರ್ಷವೇ ಬಂದರೂ ಬರಬಹುದು.. ಅದಕ್ಕೆ ಈಗಿನಿಂದಲೇ ಸಿದ್ಧರಾಗಿ ಎಂದು ಜೆಡಿಎಸ್‌ ಕಾರ್ಯಕರ್ತರಿಗೆ ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ಕರೆಕೊಟ್ಟಿದ್ದಾರೆ.. ಶಿವಮೊಗ್ಗದ ಶುಭಮಂಗಳ ಸಮುದಾಯ ಭವನದಲ್ಲಿ ಜಿಲ್ಲಾ ಜೆಡಿಎಸ್ ವತಿಯಿಂದ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮುಂದಿನ ವಿಧಾನಸಭಾ ಚುನಾವಣೆ 2028ರಲ್ಲಾದರೂ ಬರಬಹುದು, 2025ರಲ್ಲೇ ಬಂದರೂ ಬರಬಹುದು.. ಹೀಗಾಗಿ ಈಗಿನಿಂದಲೇ ಚುನಾವಣೆ ಸಿದ್ದರಾಗಬೇಕೆಂದು ಜೆಡಿಎಸ್‌ ಕಾರ್ಯಕರ್ತರಿಗೆ ಕುಮಾರಸ್ವಾಮಿ ಕರೆ ನೀಡಿದ್ದಾರೆ.. ಶಿವಮೊಗ್ಗ ಜಿಲ್ಲೆಯಲ್ಲಿ ಜೆಡಿಎಸ್‌ ಬೇರು ಗಟ್ಟಿಯಾಗಿದೆ.. ಕೆಲವರು ಪಕ್ಷಕ್ಕೆ ಬಂದು ಬಿಟ್ಟುಹೋಗುತ್ತಿರುವುದರಿಂದ ಪಕ್ಷಕ್ಕೆ ಹಿನ್ನೆಡೆಯಾಗುತ್ತಿದೆ.. ಭದ್ರಾವತಿ ಹಾಗೂ ಶಿವಮೊಗ್ಗ ಗ್ರಾಮಾಂತರದಲ್ಲಿ ಅಪ್ಪಾಜಿಗೌಡರ ಇಬ್ಬರು ಸಹೋದರಿಯರಿಂದ ಪಕ್ಷ ಪ್ರಬಲವಾಗಿದೆ ಎಂದು ಹೇಳಿದರು.. ಬೂತ್‌ ಮಟ್ಟದಿಂದ ಪಕ್ಷ ಸಂಘಟನೆಯಾಗಬೇಕು. ಈಗಿನಿಂದಲೇ ಸದಸ್ಯತ್ವ ಮಾಡಿಸಿ, ಪಕ್ಷಕ್ಕೆ ಬಲ ತುಂಬಬೇಕು ಎಂದರು..

 

Share Post