CrimeNational

50 ಲಕ್ಷಕ್ಕೆ ಸುಪಾರಿ; ಸುಪಾರಿ ಕೊಟ್ಟವನನ್ನೂ ಕೊಂದ ಹಂತಕರು!

ಮುಂಬೈ; ಇದು ಸುಪಾರಿ ಕೊಟ್ಟವನೆ ಕೊಲೆಯಾದ ಕತೆ.. ರಿಯಲ್ ಎಸ್ಟೇಟ್ ಏಜೆಂಟ್ ಒಬ್ಬ ಮತ್ತೊಬ್ಬ ಏಜೆಂಟ್ ನನ್ನು ಕೊಲೆ ಮಾಡಲು ಸುಪಾರಿ ಕೊಟ್ಟಿದ್ದ. ಆದ್ರೆ ಸುಪಾರಿ ಪಡೆದವರು ಸುಪಾರಿ ಕೊಟ್ಟವನ್ನೂ ಕೊಲೆ ಮಾಡಿದ್ದಾರೆ..

  ನವೀ ಮುಂಬೈನಲ್ಲಿ ಈ ಘಟನೆ ನಡೆದಿದೆ.. ಈ ಸಂಬಂಧ ಪೊಲೀಸರು 5 ಆರೋಪಿಗಳನ್ನ ಬಂಧಿಸಿದ್ದಾರೆ.. ಇಬ್ಬರೂ ರಿಯಲ್ ಎಸ್ಟೇಟ್ ಏಜೆಂಟರು ವಾರದಿಂದ ನಾಪತ್ತೆಯಾಗಿದ್ದರು. ಮುಂಬೈನ ಬೇರೆ ಬೇರೆ ಕಡೆ ಇಬ್ಬರ ಮೃತ ದೇಹಗಳು ಸಿಕ್ಕಿದ್ದವು..

  ರಿಯಲ್ ಎಸ್ಟೇಟ್ ಏಜೆಂಟ್ ಸುಮಿತ್ ಜೈನ್ ಎಂಬಾತ ಅಮೀರ್ ಖಾಂಜಾದಾ ಎಂಬಾತನ ಕೊಲೆಗೆ ಸುಪಾರಿ ಕೊಟ್ಟಿದ್ದ.. ಸುಮಿತ್ ಜೈನ್ ರಾಯಗಡದಲ್ಲಿ  ಜಮೀನೊಂದರ ಮಾಲೀಕ ಸವಣ್ಣಪ್ಪಿದ್ದರಿಂದ ನಕಲಿ ದಾಖಲೆ ಸೃಷ್ಟಿ ಮಾಡಿದ್ದ.. ಇದನ್ನು ತಿಳಿದಿದ್ದ ಅಮೀರ್ ಪಾಲು ಕೇಳಿದ್ದ.. ಹೀಗಾಗಿ ಸುಪಾರಿ ಕೊಡಲಾಗಿತ್ತು.

 ಹೇಳಿದಂತೆ ಸುಪಾರಿ ಹಂತಕರು ಕೊಲೆ ಮಾಡಿದ್ದರು. ಆದ್ರೆ ಜೈನ್ 50 ಲಕ್ಷದ ಬದಲು 25 ಲಕ್ಷ ಅಷ್ಟೇ ನೀಡೋದಾಗಿ ಹೇಳಿದ್ದಾನೆ. ಇದರಿಂದ ಕೆರಳಿದ ಹಂತಕರು ಜೈನ್ ನನ್ನೂ ಕೊಂದಿದ್ದಾರೆ.

 

Share Post