DistrictsNational

ಅಂತ್ಯಕ್ರಿಯೆ ಮುಗಿಸಿ ಬರುತ್ತಿದ್ದಾಗ ಭೀಕರ ಅಪಘಾತ; ಐವರ ದುರ್ಮರಣ!

ಕಡಪ (Andhrapradesh); ಆಂಧ್ರಪ್ರದೇಶದ ಕಡಪ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ದುರಂತದಲ್ಲಿ 5 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ.. ಇಲ್ಲಿನ ಗುವ್ವಾಳ ಚೆರುವು ಘಾಟ್‌ ಬಳಿಯ ಚಿಂತಕೊಮ್ಮದಿನ್ನೆ ಬಳಿ ಕಾರಿಗೆ ಕಂಟೈನರ್‌ ಒಂದು ಡಿಕ್ಕಿ ಹೊಡೆದು ಈ ದುರಂತ ನಡೆದಿದೆ..

ಇದನ್ನೂ ಓದಿ; ವಾಂತಿ, ಭೇದಿಯಿಂದ ಮೂವರ ದುರ್ಮರಣ, 11 ಮಂದಿ ಅಸ್ವಸ್ಥ!

ಕಾರಿನ ಡಿಕ್ಕಿ ಹೊಡೆದ ನಂತರ ಕಂಟೈನರ್‌ ಕಣಿವೆಗೆ ಬಿದ್ದಿದೆ.. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.. ಕಾರಿನಲ್ಲಿದ್ದ ಐವರು ಸಾವನ್ನಪ್ಪಿದ್ದಾರೆ.. ಮೃತರೆಲ್ಲರೂ ಚಕ್ರಾಯಪೇಟ ಮಂಡಲ್‌ನ ಕೊನ್ನೇಪಲ್ಲಿ ಗ್ರಾಮದವರೆಂದು ತಿಳಿದುಬಂದಿದೆ.. ಸಂಬಂಧಿಕರ ಅಂತ್ಯಕ್ರಿಯೆ ಮುಗಿಸಿ ವಾಪಸ್‌ ಬರುತ್ತಿದ್ದಾಗ ಈ ಅಪಘಾತ ಸಂಭವಿಸಿದೆ..

ಇದನ್ನೂ ಓದಿ; ಭಾರತದಲ್ಲಿ ಟೆಲಿಗ್ರಾಮ್‌ ಆ್ಯಪ್ ನಿಷೇಧಕ್ಕೆ ಚಿಂತನೆ!

ಇನ್ನು ಇದೇ ವೇಳೆ, ಕಡಪ ಜಿಲ್ಲೆಯಲ್ಲೇ ಮತ್ತೊಂದು ಅಪಘಾತ ಸಂಭವಿಸಿದೆ. ದುವ್ವೂರು ಮಂಡಲ ಚಿಂತಗುಂಟದಲ್ಲಿ ಕಾರು ಪಲ್ಟಿಯಾಗಿ ಇಬ್ಬರು ಮೃತಪಟ್ಟು, ಐವರು ಗಾಯಗೊಂಡಿದ್ದಾರೆ. ಕರ್ನೂಲ್‌ನಿಂದ ತಿರುಪತಿಗೆ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Share Post