CrimeDistricts

ಜಮೀನಿಗಾಗಿ ದಯಾದಿಗಳ ಕಲಹ; ಒಬ್ಬರ ಕೊಲೆ!

ಚಿಕ್ಕಬಳ್ಳಾಪುರ; ಜಮೀನು ವಿಚಾರಕ್ಕೆ ದಾಯಾದಿಗಳ ನಡುವೆ ಗಲಾಟೆ ನಡೆದಿದ್ದು, ಅದು ತಾರಕಕ್ಕೇರಿ ಒಬ್ಬರ ಕೊಲೆಯಲ್ಲಿ ಅಂತ್ಯವಾಗಿದೆ.. ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲ್ಲೂಕಿನ ನಡುವನಹಳ್ಳಿ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ.. ಪಿತ್ರಾರ್ಜಿತ ಆಸ್ತಿಗಾಗಿ ಈ ಜಗಳ ನಡೆದಿದ್ದು, ಈ ವೇಳೆ ತೀವ್ರ ಮೆಟ್ಟು ಬಿದ್ದು 55 ವರ್ಷದ ನಂಜುಂಡಯ್ಯ ಎಂಬುವವರು ಕೊಲೆಯಾಗಿದ್ದಾರೆ..

ಇದನ್ನೂ ಓದಿ; ಮ.2.30ರ ನಂತರ ಸಿದ್ದರಾಮಯ್ಯ ಅರ್ಜಿ ವಿಚಾರಣೆ; ಶರುವಾಯ್ತು ಢವಢವ!

ಜಮೀನಿಗಾಗಿ ಕಲ್ಲು ಹಾಗೂ ದೊಣ್ಣೆಗಳಿಂದ ಬಡಿದಾಡಿಕೊಂಡಿದ್ದಾರೆ.. ಇದರಿಂದಾಗಿ ನಂಜುಂಡಯ್ಯ ಅವರಿಗೆ ತೀವ್ರ ಗಾಯಗಳಾಗಿದ್ದವು. ಅವರನ್ನು ಕೂಡಲೇ ಗೌರಿಬಿದನೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದ್ರೆ ತೀವ್ರ ರಕ್ತಸ್ರಾವವಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ.. ಘಟನೆಯಿಂದಾಗಿ ನಡುವನಹಳ್ಳಿ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ಏರ್ಪಟ್ಟಿದೆ.. ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಪರಿಸ್ಥಿತಿ ತಿಳಿಗೊಳಿಸುವ ಕೆಲಸ ಮಾಡುತ್ತಿದ್ದಾರೆ..

ಇದನ್ನೂ ಓದಿ; 6 ಗಂಡಂದಿರಿಂದ ಜೀವನಾಂಶ; 7ನೇ ಗಂಡನಿಂದ ಜೀವನಾಂಶಕ್ಕಾಗಿ ಅರ್ಜಿ?

Share Post