BengaluruCrime

ಪೊಲೀಸರ ಮೇಲಿನ ಕೋಪಕ್ಕೆ ವಿಧಾನಸೌಧದ ಮುಂದೆ ಬೈಕ್‌ಗೆ ಬೆಂಕಿ!

ಬೆಂಗಳೂರು; ಪೊಲೀಸರ ಮೇಲಿನ ಕೋಪಕ್ಕೆ ಯುವಕನೊಬ್ಬ ವಿಧಾನಸೌಧದ ಎದುರು ಬೈಕ್‌ ನಿಲ್ಲಿಸಿ ಅದಕ್ಕೆ ಬೆಂಕಿ ಹಚ್ಚು ಆಕ್ರೋಶ ವ್ಯಕ್ತಪಡಿಸಿದ್ದಾನೆ.. ಪೊಲೀಸರು ಯುವಕ ತಾಯಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆಂದು ಆ ಯುವಕ ಆರೋಪ ಮಾಡಿದ್ದಾನೆ.. ಚಳ್ಳಕೆರೆ ಮೂಲದ ಪೃಥ್ವಿರಾಜ್‌ ಬೈಕ್‌ ಸುಟ್ಟ ಯುವಕ ಯುವಕನಾಗಿದ್ದಾನೆ…

ಇದನ್ನೂ ಓದಿ; ಅಕ್ರಮ ವರ್ಗಾವಣೆ; ಎರಡು ಬ್ಯಾಂಕ್‌ಗಳಲ್ಲಿನ ಎಲ್ಲಾ ಸರ್ಕಾರಿ ಖಾತೆ ಕ್ಲೋಸ್‌!

ಪೃಥ್ವಿರಾಜ್‌ ಎಂಬ ಯುವಕ ಟ್ರಕ್ಕಿಂಗ್‌ಗೆಂದು ಹೋದವನು ನಾಪತ್ತೆಯಾಗಿದ್ದ.. ಇದರಿಂದ ಗಾಬರಿಯಾದ ಆತನ ತಾಯಿ ಚಳ್ಳಕೆರೆ ಪೊಲೀಸರಿಗೆ ದೂರು ನೀಡಲು ಹೋಗಿದ್ದಾರೆ.. ಈ ವೇಳೆ ಪೊಲೀಸರು ಪೃಥ್ವಿ ತಾಯಿಯನ್ನು ಅವಾಚ್ಯ ಶಬ್ದಗಳಿಂದ ಬೈದಿದ್ದಾರಂತೆ.. ಇದರಿಂದ ಆಕ್ರೋಶಗೊಂಡ ಯುವ ಪೃಥ್ವಿ ನೇರವಾಗಿ ಬೆಂಗಳೂರಿನ ವಿಧಾನಸೌಧಕ್ಕೆ ಬಂದಿದ್ದಾನೆ.. ವಿಧಾನಸೌಧದ ಮುಂದೆ ಸ್ಕೂಟರ್‌ ನಿಲ್ಲಿಸಿ ಅದಕ್ಕೆ ಬೆಂಕಿ ಹಚ್ಚಿದ್ದಾನೆ..
ಕೂಡಲೇ ವಿಧಾನಸೌಧ ಠಾಣೆ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ..

ಇದನ್ನೂ ಓದಿ; ಸುಂದರಿ ಹೆಂಡತಿ ಮೇಲೆ ಅನುಮಾನ; ಕೊಂದೇಬಿಟ್ಟ ಪಾಪಿ!

Share Post